ಶಾಸಕ ವಿನಯ ಕುಲಕರ್ಣಿ ಅಭಿಮಾನಿಗಳಿಂದ ಕ್ಷೇತ್ರದಲ್ಲಿ “ಹಸಿರು” ಹೆಚ್ಚಿಸಲು ಪಣ…!!!

ಧಾರವಾಡ: ಶಾಸಕ ವಿನಯ ಕುಲಕರ್ಣಿ ಅಭಿಮಾನಿ ಬಳಗವೂ ಕ್ಷೇತ್ರದಲ್ಲಿ ಹಸಿರು ಹೆಚ್ಚಿಸಲು ಪಣತೊಟ್ಟಿದ್ದು, ನಗರ ಪ್ರದೇಶದಲ್ಲೂ ಗಿಡಗಳನ್ನ ನೆಟ್ಟು ವಾತಾವರಣ ಉತ್ತಮಗೊಳಿಸಲು ಮುಂದಾಗಿದೆ.
ಧಾರವಾಡದ ಚರಂತಿಮಠ ಗಾರ್ಡನ್ ರಸ್ತೆಯಿಂದ ಹೆಬ್ಬಳ್ಳಿಗೆ ಹೋಗುವ ರಸ್ತೆಯಲ್ಲಿ ನೂರಾರು ಗಿಡಗಳನ್ನು ನೆಟ್ಟು ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಸಕರ ಆಪ್ತ ಸಹಾಯಕ ಪ್ರಶಾಂತ್ ಕೇಕರೆ, ಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ್ ಸಿದ್ದನಗೌಡ, ಶಹರ ಠಾಣೆ ಪೊಲೀಸ್ ಇನ್ಸ್ಪೆ್ಪೆಕ್ಟರ್ ನಾಗೇಶ ಕಾಡದೇವರಮಠ, ಪಾಲಿಕೆ ಸದಸ್ಯೆ ದೀಪಾ ನೀರಲಕಟ್ಟಿ, ಬಸವರಾಜ ಜಾಧವ, ಆನಂದ ಸಿಂಗನಾಥ, ಸಂತೋಷ ನೀರಲಕಟ್ಟಿ, ರಾಜು ದಮ್ಮಳ್ಳಿ, ಸಂಜು ತುರಮರಿ, ರವಿ ಲೋಲೆನವರ, ಮಹೇಶ್ ಡವಳೆ ಸೇರಿದಂತೆ ಅನೇಕಅಭಿಮಾನಿಗಳು, ಸಾರ್ವಜನಿಕರು ಭಾಗವಹಿಸಿದ್ದರು.