Posts Slider

Karnataka Voice

Latest Kannada News

ಶಾಸಕ ವಿನಯ ಕುಲಕರ್ಣಿಯವರಿಗೆ “ಪುಸ್ತಕ” ನೀಡಿ ಬರ್ತಡೇ “ವಿಶ್” ಮಾಡಿದ ವೀರಶೈವ ಲಿಂಗಾಯತ ‘ಯುವ ಮುಖಂಡ’…

1 min read
Spread the love

ಧಾರವಾಡ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಶಾಸಕರಾಗಿರುವ ವಿನಯ ಕುಲಕರ್ಣಿ ಅವರಿಗೆ ಪುಸ್ತಕಗಳನ್ನ ನೀಡಿ, ಹುಟ್ಟುಹಬ್ಬದ ಶುಭಾಶಯಗಳನ್ನ ಸಮುದಾಯದ ಮುಖಂಡರು ತಿಳಿಸಿದರು.

ಕಿತ್ತೂರಿನಲ್ಲಿ ಭೇಟಿ ಮಾಡಿದ ವೀರಶೈವ ಲಿಂಗಾಯತ ಸಮುದಾಯದ ಧಾರವಾಡ ಜಿಲ್ಲೆಯ ಯುವ ಘಟಕದ ಅಧ್ಯಕ್ಷ ಮಂಜುನಾಥ ಹೆಬಸೂರ, ಶಾಸಕರ ಆಯಸ್ಸು, ಆರೋಗ್ಯ ಚೆನ್ನಾಗಿರಲಿ ಎಂದು ಕೋರಿದರು.

ಬರಗಾಲ ಇರುವ ಹಿನ್ನೆಲೆಯಲ್ಲಿ ಆಡಂಬರ ಬೇಡವೆಂದು ಹೇಳಿದ ವಿನಯ ಕುಲಕರ್ಣಿಯವರ ಅಣತಿಯಂತೆ ಪುಸ್ತಕಗಳನ್ನ ನೀಡಿದ್ದ ಮಂಜುನಾಥ ಹೆಬಸೂರ ವಿಭಿನ್ನವಾಗಿ ಶುಭಾಶಯ ಕೋರಿದರು.

ಮಹಾಸಭಾದ ಪ್ರಧಾನ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ, ಬಸವರಾಜ ಗೋಳಪ್ಪನವರ, ಶಂಕರಗೌಡ ಪಾಟೀಲ ಹಾಗೂ ಚೇತನ ಮಾರ್ಗಲಶೆಟ್ಟರ ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *