ಶಾಸಕ ಅರವಿಂದ ಬೆಲ್ಲದ ಕ್ಷೇತ್ರದ “ಸೋರುತ್ತಿದ್ದ ಕಾಲೇಜಿಗೆ” ಸಡನ್ನಾಗಿ ಭೇಟಿ ನೀಡಿದ ಸಚಿವ ಸಂತೋಷ ಲಾಡ…

ಧಾರವಾಡ: ಕಳೆದ ಐದು ದಿನಗಳ ಹಿಂದೆ ಕರ್ನಾಟಕವಾಯ್ಸ್.ಕಾಂ ಹೊರ ಹಾಕಿದ್ದ ಸರಕಾರಿ ಕಾಲೇಜಿನ ಸ್ಥಿತಿಯನ್ನ ಗಮನಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ಕಾಲೇಜಿಗೆ ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕ ಅರವಿಂದ ಬೆಲ್ಲದ ಅವರ ಕ್ಷೇತ್ರದಲ್ಲಿ ಬರುವ ಸರಕಾರಿ ಕಾಲೇಜಿನ ಸ್ಥಿತಿ ಅಯೋಮಯವಾಗಿತ್ತು. ವಿದ್ಯಾರ್ಥಿನಿಯರು ಆತಂಕದಿಂದ ತರಗತಿಯಲ್ಲಿ ಕೂಡುವ ಸ್ಥಿತಿ ಬಂದೋಗಿದೆ. ಈ ಬಗ್ಗೆ ಕರ್ನಾಟಕವಾಯ್ಸ್.ಕಾಂ ಗಮನ ಸೆಳೆದಿತ್ತು.
ಅವತ್ತಿನ ಸುದ್ಧಿ ಲಿಂಕ್
ನೀವೂ ‘ಅರವಿಂದ ಬೆಲ್ಲದ’ ಕ್ಷೇತ್ರದವರು… ‘ದಯವಿಟ್ಟು’ ಈ ವಿಷಯವನ್ನ ಮುಟ್ಟಿಸಿ…!!!
ಈ ಸಂಬಂಧಿಸಿದಂತೆ ಸಚಿವ ಸಂತೋಷ ಲಾಡ ಅವರು ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತಕ್ಷಣವೇ ಸಮಸ್ಯೆ ಬಗೆಹರಿಸಲು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಭೇಟಿಯ ವೀಡಿಯೋ