Posts Slider

Karnataka Voice

Latest Kannada News

MLA ಅರವಿಂದ ಬೆಲ್ಲದ್‌ರಿಗೆ ಕೊನೆಗೂ ಸಿಕ್ಕ “ನಾಮಕಾವಾಸ್ತೆ” ವಿರೋಧಪಕ್ಷದ “ಉಪನಾಯಕ” ಹುದ್ದೆ…!!!

1 min read
Spread the love

ನವದೆಹಲಿ: ಹಲವು ವರ್ಷಗಳಿಂದ ಭಾರತೀಯ ಜನತಾ ಪಕ್ಷದಿಂದ ಏನಾದರೂ ಒಂದು ಆಗಲೇಬೇಕು ಎಂದುಕೊಳ್ಳುತ್ತಿದ್ದ ಶಾಸಕ ಅರವಿಂದ ಬೆಲ್ಲದ್ ಅವರನ್ನ ಕೊನೆಗೂ ಬಿಜೆಪಿ ವಿಧಾನಸಭೆ ವಿರೋಧ ಪಕ್ಷದ ಉಪನಾಯಕರನ್ನಾಗಿ ಮಾಡಿ ಆದೇಶ ಹೊರಡಿಸಿದೆ.

ಬಿಎಸ್‌ವೈ ಸಿಎಂ ಹುದ್ದೆಯಿಂದ ಇಳಿಯುವ ಸಮಯದಲ್ಲಿ ಸಿಎಂ ಆಗುತ್ತಾರೆಂದೂ, ಬಸವರಾಜ ಬೊಮ್ಮಾಯಿ ಸಿಎಂ ಆದಾಗ ಇವರು ಮಂತ್ರಿಯಾಗುತ್ತಾರೆಂದೂ, ಬಿಜೆಪಿ ಸೋತಾಗ ವಿರೋಧ ಪಕ್ಷದ ನಾಯಕರಾಗುತ್ತಾರೆಂದೂ ಹೇಳಲಾಗುತ್ತಿತ್ತು. ಆದರೆ, ಅರವಿಂದ ಬೆಲ್ಲದ ಅವರನ್ನ ಇದೀಗ ಉಪನಾಯಕ ಹುದ್ದೆಗೆ ನೇಮಕ ಮಾಡಲಾಗಿದೆ.

ಇನ್ನುಳಿದಂತೆ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರನ್ನಾಗಿ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನ ನೇಮಕ ಮಾಡಲಾಗಿದೆ. ಎನ್.ರವಿಕುಮಾರ ಅವರನ್ನ ಮುಖ್ಯ ಸಚೇತಕರನ್ನಾಗಿಸಲಾಗಿದೆ.


Spread the love

Leave a Reply

Your email address will not be published. Required fields are marked *