ಹೈಟೆಕ್ ಸ್ವಾಮಿ 10ಕೋಟಿ ತುಗೊಂಡು ಸ್ಟೇಜ್ ಬಿಟ್ಟು ಹೋದಾ…!

ಕಲಬುರಗಿ: ಪಂಚಮಸಾಲಿ ಸಮುದಾಯವನ್ನ 2ಎಗೆ ಸೇರಿಸಬೇಕೆಂಬ ಹೋರಾಟದಲ್ಲಿ ಹೈಟೆಕ್ ಸ್ವಾಮಿಯೊಬ್ಬರು 10 ಕೋಟಿ ರೂಪಾಯಿ ಪಡೆದುಕೊಂಡು ವೇದಿಕೆ ಬಿಟ್ಟು ಕೆಳಗೆ ಹೋದರೆಂದು ಭಾರತೀಯ ಜನತಾ ಪಕ್ಷದ ರೆಬೆಲ್ ಶಾಸಕ ಹಾಗೂ ಸಮುದಾಯದ ಮುಖಂಡ ಬಸನಗೌಡ ಪಾಟೀಲಯತ್ನಾಳ ಹೇಳಿದ್ದಾರೆ.
ಮಾತನಾಡಿರೋ ಪೂರ್ಣ ವೀಡಿಯೋ ಇಲ್ಲಿದೆ ನೋಡಿ..
ಪಂಚಮಸಾಲಿ ಸಮುದಾಯದ ಹೋರಾಟವನ್ನ ಕೊನೆಗಳಿಸಬೇಕೆಂದು ಕೆಲವು ಸಚಿವರು ಹಣವನ್ನ ಹಿಡಿದುಕೊಂಡು ಅಲೆದಾಡಿದರು. ಕೂಡಲಸಂಗಮದ ಸ್ವಾಮೀಜಿಗಳು ಅವರನ್ನ ದೂರಿಟ್ಟರು. ಆದರೆ, ಇನ್ನೊಬ್ಬ ಸ್ವಾಮಿ ಹತ್ತು ಕೋಟಿ ತೆಗೆದುಕೊಂಡು ಹೊರನಡೆದರು ಎಂದು ಟೀಕಿಸಿದರು.
ಸಮುದಾಯದ ಶಕ್ತಿಯನ್ನ ಯಾವತ್ತೂ ತೋರಿಸರಲಿಲ್ಲ. ಈ ಬಾರಿ ಅದನ್ನೇಲ್ಲ ಸಮುದಾಯ ಮಾಡಿದೆ ಎಂದು ಹೇಳಿದರು.