Posts Slider

Karnataka Voice

Latest Kannada News

ಮಂತ್ರಿ ಅರ್ಹತೆಯಿದ್ದ ಶಂಕರ ಪಾಟೀಲಮುನೇನಕೊಪ್ಪಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ- 24 ಶಾಸಕರ ಪಟ್ಟಿ ಇಲ್ಲಿದೆ

1 min read
Spread the love

: ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರಿಗೆ ಕರ್ನಾಟಕ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಸರಳ ವ್ಯಕ್ತಿತ್ವದ ನವಲಗುಂದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಅವರಿಗೆ ಈ ಸಲವಾದರೂ ಮಂತ್ರಿ ಸ್ಥಾನ ಸಿಗಬಹುದೆಂದು ಧಾರವಾಡ ಜಿಲ್ಲೆಯಾಧ್ಯಂತ ಕಾರ್ಯಕರ್ತರು ಬಯಸಿದ್ದರು. ಆದರೆ, ರಾಜ್ಯ ಸರಕಾರ ಮುನೇನಕೊಪ್ಪರಿಗೆ ನಿಗಮ ನೀಡುವ ಮೂಲಕ ಬೇರೆಯದೇ ಲೆಕ್ಕಾಚಾರ ಮಾಡಿದೆ.


ಧಾರವಾಡ ಜಿಲ್ಲೆಯ ಗ್ರಾಮಾಂತರ ವಿಭಾಗಕ್ಕೆ ಸಚಿವ ಸ್ಥಾನ ನೀಡಬೇಕಾದ ಜವಾಬ್ದಾರಿ ಸಿಎಂ ಬಿಎಸ್‌ವೈ ಮೇಲಿತ್ತು. ಆದರೀಗ, ನಿಗಮ ನೀಡುವ ಮೂಲಕ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.
ಶಾಸಕ ಶಂಕರ ಪಾಟೀಲಮುನೇನಕೊಪ್ಪ ಮಾತ್ರ ಪಕ್ಷದ ಕಟ್ಟಾ ಹುರಿಯಾಳಾಗಿದ್ದು, ಪಕ್ಷ ನೀಡಿದ ಆದೇಶವನ್ನ ನಿಭಾಯಿಸಲಿದ್ದಾರೆ.


Spread the love

Leave a Reply

Your email address will not be published. Required fields are marked *