Posts Slider

Karnataka Voice

Latest Kannada News

ರಾಜ್ಯದ ಜೆಡಿಎಸ್ ಶಾಸಕ ಸಾವು: ಕಂಬನಿ ಮಿಡಿದ ಮಾಜಿ ಪ್ರಧಾನಿ

1 min read
Spread the love

ಬೆಂಗಳೂರು: ಶಿರಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಬಿ.ಸತ್ಯನಾರಾಯಣ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ನಾಲ್ಕು ಬಾರಿ ಶಿರಾದಲ್ಲಿ ಶಾಸಕರಾಗಿದ್ದರು

ಎರಡು ಬಾರಿ ಸಚಿವರಾಗಿದ್ದರು

ಸಣ್ಣ ಕೈಗಾರಿಕಾ, ನೀರಾವರಿ, ಲಾಟರಿ ಸಚಿವರಾಗಿದ್ದರು

ಮೂಲತಃ ವಕೀಲರಾಗಿದ್ದರು ಶಿರಾದ ಭುವನಹಳ್ಳಿಯ ಸ್ವಗ್ರಾಮ

ಓರ್ವ ಪುತ್ರ ನಾಲ್ವರು ಹೆಣ್ಣುಮಕ್ಕಳನ್ನ ಹೊಂದಿದ್ದರು

ಅನೇಕ ವರ್ಷಗಳಿಂದ ಲಿವರ್ ಸಮಸ್ಯೆ ಇತ್ತು ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ದೇವೇಗೌಡ..

ಮಾಜಿ ಸಚಿವರು ಮತ್ತು ಶಾಸಕರು ಹಾಗೂ ನನ್ನ ಸನ್ಮಿತ್ರರು ಆದ ಶ್ರೀ ಬಿ. ಸತ್ಯನಾರಾಯಣ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ.

ಸತ್ಯನಾರಾಯಣ್ ಮತ್ತು ನನ್ನ ಸ್ನೇಹ ಸುಮಾರು 3 ದಶಕಗಳದ್ದು ಅವರಿಲ್ಲದ ದಿನಗಳನ್ನು ನೆನೆಯಲು ನನ್ನಿಂದ ಸಾಧ್ಯವೇ ಇಲ್ಲ.

ಸತ್ಯನಾರಾಯಣ್ ಅವರು ತುಂಬಾ ಮೃದು ಸ್ವಭಾವದವರು ಅವರ ಅಗಲಿಕೆಯಿಂದ ನಮ್ಮ ನಾಡಿಗೆ ತುಂಬಲಾಗದ ನಷ್ಟ ಉಂಟಾಗಿದೆ.

ಮೃತರ ಆತ್ಮಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೀನಿ ಎಂದಿದ್ದಾರೆ.

ಶಾಸಕರ ವಿವರ ಇಲ್ಲಿದೆ ನೋಡಿ…


Spread the love

Leave a Reply

Your email address will not be published. Required fields are marked *

You may have missed