Posts Slider

Karnataka Voice

Latest Kannada News

ಪ್ರಾಮಾಣಿಕ ಸಚಿವ ಸಂತೋಷ ಲಾಡ “ಹೆಸರು ಕೆಡಿಸಲು” DDPI ಷಡ್ಯಂತ್ರ…!!?

1 min read
Spread the love

ಧಾರವಾಡ: ರಾಜ್ಯದ ಪ್ರಾಮಾಣಿಕ ಸಚಿವರಲೊಬ್ಬರಾದ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರ ಹೆಸರನ್ನ ಕೆಡಿಸಲು ಡಿಡಿಪಿಐ ಅವರು ಮುಂದಾಗಿದ್ದಾರೆಂಬ ಆರೋಪಗಳು ಕೇಳಿ ಬರುತ್ತಿವೆ.

ಧಾರವಾಡ ಜಿಲ್ಲೆಯಿಂದ ಅತ್ಯುತ್ತಮ ಶಿಕ್ಷಕರನ್ನ ಆಯ್ಕೆ ಮಾಡುವುದರಲ್ಲಿ ಪಾರದರ್ಶಕತೆ ಅನುಸರಿಸದೇ, ಬೇಕಾಬಿಟ್ಟಿಯಾಗಿ ರಾಜ್ಯಕ್ಕೆ ಹೆಸರು ಕಳಿಸುವ ಯತ್ನದಲ್ಲಿ ಡಿಡಿಪಿಐ ಕೆಳದಿಮಠ ಅವರು ಮುಂದಾಗಿದ್ದಾರೆಂದು ಹೇಳಲಾಗಿದ್ದು, ಈ ಮೂಲಕ ಸಚಿವರ ಪ್ರಾಮಾಣಿಕತೆಯನ್ನ ಪ್ರಶ್ನಿಸುವ ಸ್ಥಿತಿಯನ್ನ ತರಲಾಗುತ್ತಿದೆ.

ನಿಯಮದ ಪ್ರತಿ…

ಆಯ್ಕೆ ಮಾಡುವಾಗ ಅನುಸರಿಸುವ ವಿಧಾನಗಳನ್ನೇ ಬುಡಮೇಲು ಮಾಡಿ, ಯಾರದ್ದೋ ಪುಸ್ತಕವನ್ನ ಇವರೇ ಬರೆದಿದ್ದಾರೆಂದು ಸುಳ್ಳು ಕಥೆ ಕಟ್ಟಲಾಗಿದೆಯಂತೆ. ಅಷ್ಟೇ ಅಲ್ಲ, ಗ್ರಾಮಾಂತರ ಹಾಗೂ ಮಹಿಳಾ ಶಿಕ್ಷಕಿಯರನ್ನ ಸಂಪೂರ್ಣ ಕಡೆಗಣಿಸಿ, ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಜೊತೆಗೂಡಿ ಡಿಡಿಪಿಐ ಅವರು ಪ್ರಶಸ್ತಿ ಮೌಲ್ಯವನ್ನ ಕಳೆಗುಂದಿಸುತ್ತಿದ್ದಾರಂತೆ.

ಸಚಿವ ಸಂತೋಷ ಲಾಡ ಅವರು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಇಂತಹದ್ದನ್ನ ಮಾಡಲು ಬಿಡೋದಿಲ್ಲವೆಂಬ ಕಲ್ಪನೆ ಪ್ರಜ್ಞಾವಂತ ಶಿಕ್ಷಕರಲ್ಲಿದೆ. ಡಿಡಿಪಿಐ ಕೆಳದಿಮಠ ಅವರ ಉದ್ದೇಶ ಮಾತ್ರ ಬೇರೆಯದ್ದೆ ಇರಬಹುದೆಂದು ಹೇಳಲಾಗುತ್ತಿದೆ.


Spread the love

Leave a Reply

Your email address will not be published. Required fields are marked *