Posts Slider

Karnataka Voice

Latest Kannada News

ಕೇಂದ್ರ ಸಚಿವ ‘ಜೋಶಿ’ ಕಚೇರಿ ಪಕ್ಕದಲ್ಲೇ ಸ್ಪೋಟವಾದರೂ…! ಇಷ್ಟೊಂದು ನಿರ್ಲಕ್ಷ್ಯ.. !

1 min read
Spread the love

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ಕಚೇರಿಗೆ ಕೂಗಳತೆ ದೂರದಲ್ಲೇ ಸಿಲೆಂಡರ್ ಸ್ಪೋಟಗೊಂಡರೂ ಇನ್ನೂವರೆಗೂ ಸಂಬಂಧಿಸಿದ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೇ ಇರುವುದು, ಅಧಿಕಾರಿಗಳ ನಿರ್ಲಕ್ಷ್ಯವನ್ನ ತೋರಿಸುತ್ತಿದೆ.

ಅರ್ಮಾನ ಮಲ್ಲಿಕ್ ಹೆಸರಿನ ಗ್ಯಾರೇಜ್ ನಲ್ಲಿ ಗ್ಯಾಸ್ ವೆಲ್ಡಿಂಗ್ ಮಾಡುವಾಗ ಸ್ಪೋಟಗೊಂಡಿದ್ದು, ಈ ಭಾಗದಲ್ಲಿ ಆತಂಕವನ್ನ ಸೃಷ್ಟಿ ಮಾಡಿತ್ತು. ಅಷ್ಟೇ ಅಲ್ಲ, ಅಬ್ಬಾಸ್ ಮೇಸ್ತ್ರಿಗೂ ಏನೋ ಆಗಿದೆ ಎಂಬ ಊಹಾಪೋಹಗಳು ಹಬ್ಬಿದ್ದವು. ಆದ್ರೆ, ಅಲ್ಲಿನ ಸಿಲೆಂಡರ್ ಸ್ಪೋಟಗೊಂಡಿತ್ತು.

ಕಳೆದ ಮೂರು ಗಂಟೆಯ ಹಿಂದೆ ಘಟನೆ ನಡೆದರೂ ಇಲ್ಲಿಯವರೆಗೆ ಸಂಬಂಧಿಸಿದ ಇಲಾಖೆ ಯಾರೋಬ್ಬರು ಹೋಗದೇ ಇರುವುದು, ನಗರದಲ್ಲಿ ಆಡಳಿತ ಎಷ್ಟೊಂದು ಚುರುಕಾಗಿ ನಡೆಯುತ್ತಿದೆ ಎಂಬುದನ್ನ ತೋರಿಸುತ್ತಿದೆ.

ಕೇಂದ್ರ ಸಚಿವರ ಕಚೇರಿಯ ಪಕ್ಕವೇ ನಡೆದರೂ, ಈ ಸ್ಥಿತಿ ಇರುವಾಗ ಸಾಮಾನ್ಯ ಸ್ಥಳದಲ್ಲಿ ನಡೆದರೇ ಮುಂದೇನು ಗತಿ ಎನ್ನುವಂತಾಗಿದೆ. ಯಾವುದಕ್ಕೂ ಅಧಿಕಾರಿಗಳ ಮನಸ್ಥಿತಿಯ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿವರೇ ಏನಾದರೂ ಮಾಡಬೇಕಷ್ಟೇ..!


Spread the love

Leave a Reply

Your email address will not be published. Required fields are marked *