ಕೈಲಾಗದ “ಜಮೀರ ಅಹ್ಮದ”- ಪಕ್ಷ ತೊರೆಯಲು ಮುಂದಾದ ಇಸ್ಮಾಯಿಲ್ ತಮಾಟಗಾರ…!?

ಬೆಂಗಳೂರು: ಮುಂಬೈ ಕರ್ನಾಟಕದ ಮುಸ್ಲಿಂ ಸಮಾಜದ ಮುಖಂಡ, ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಇಸ್ಮಾಯಿಲ್ ತಮಾಟಗಾರ ಅವರಿಗೆ ಎಂಎಲ್ಸಿ ಟಿಕೆಟ್ ಕೊಡಿಸುವಲ್ಲಿ ಸಚಿವ ಜಮೀರ ಅಹ್ಮದ ಖಾನ ಅವರು ವಿಫಲವಾಗಿದ್ದು, ಇಸ್ಮಾಯಿಲ್ ತಮಾಟಗಾರ ಅವರು ಪಕ್ಷ ತೊರೆಯುವ ಸಾಧ್ಯತೆಯಿದೆ.
ಕಾಂಗ್ರೆಸ್ ಪಕ್ಷದ ಅಭಿವೃದ್ಧಿಗಾಗಿ, ಸಂಘಟನೆ ಮಾಡುತ್ತ ಮುನ್ನಡೆಯುತ್ತಿರುವ ಇಸ್ಮಾಯಿಲ್ ತಮಾಟಗಾರ ಅವರಿಗೆ ವಿಧಾನಪರಿಷತ್ ಸದಸ್ಯರಾಗುವ ಎಲ್ಲ ಯೋಗ್ಯತೆಯಿತ್ತು. ಅಷ್ಟೇ ಅಲ್ಲ, ಸ್ವತಃ ಸಚಿವ ಜಮೀರ್ ಅಹ್ಮದಖಾನ ಅವರು ಮಾಡಿಯೇ ತೀರುತ್ತೇನೆ ಎಂದುಕೊಂಡಿದ್ದರು.
ಇದೀಗ ಜಮೀರ ಅಹ್ಮದಖಾನ ಅವರದ್ದು ದೆಹಲಿಯಲ್ಲಿ ಏನೂ ನಡೆಯಲಾರದು ಮತ್ತೂ ಪಕ್ಷದಲ್ಲಿ ಅವರ ಹೆಸರಿಗಷ್ಟೇ ಮುಸ್ಲಿಂ ಸಚಿವ ಎಂಬುವುದು ಸಾಬೀತಾಗಿದೆ. ಹಾಗಾಗಿಯೇ ರೋಸಿ ಹೋಗಿರುವ ಇಸ್ಮಾಯಿಲ್ ತಮಾಟಗಾರ ಪಕ್ಷ ತೊರೆಯುವ ಮನಸ್ಸು ಮಾಡಿದ್ದಾರೆಂದು ಗೊತ್ತಾಗಿದೆ.