“ಇಂತಹ ಸಮಯದಲ್ಲಿ” ಸಿಎಂ ಬಸವರಾಜ ಬೊಮ್ಮಾಯಿ “ಸಚಿವ ಶಂಕರ ಪಾಟೀಲ”ರ ಬಗ್ಗೆ ಏನಂದ್ರು ಗೊತ್ತಾ…

ಹುಬ್ಬಳ್ಳಿ: ರಾಜ್ಯದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು ಜನರು ಸಂಕಷ್ಟದಲ್ಲಿದ್ದ ಪ್ರದೇಶಗಳಿಗೆ ಸಚಿವರು ಭೇಟಿ ನೀಡಿ, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮೊನ್ನೆ ಅಷ್ಟೇ ಬೀದರಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ತೆರಳಿ, ಅಲ್ಲಿನ ಸಮಸ್ಯೆಯನ್ನು ಆಲಿಸಿ, ಬಗೆಹರಿಸಿದ್ದಾರೆಂದು ಹೇಳಿದರು.
ಈ ಬಗ್ಗೆ ಸಿಎಂ ಹೇಳಿಕೆ ಇಲ್ಲಿದೆ ನೋಡಿ…
ರಾಜಧಾನಿಯಿಂದ ವಿಶೇಷ ವಿಮಾನದಲ್ಲಿ ಬಂದ ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಮಾನ ನಿಲ್ದಾಣದಲ್ಲಿ ಮಾತನಾಡುವಾಗ, ತಮ್ಮ ಸಚಿವರ ಕಾರ್ಯವೈಖರಿಯನ್ನ ಮಾಧ್ಯಮದವರ ಮುಂದೆ ಹೇಳಿಕೊಂಡರು.
ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ರಾಯಚೂರು ಮತ್ತು ಬೀದರ ಜಿಲ್ಲಾ ಉಸ್ತುವಾರಿ ಕೊಟ್ಟಿದ್ದು, ಎರಡು ಜಿಲ್ಲೆಗಳಲ್ಲಿ ಸಚಿವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆಂಬುದನ್ನ ಇಲ್ಲಿ ಸ್ಮರಿಸಬೇಕಾಗತ್ತೆ.