Posts Slider

Karnataka Voice

Latest Kannada News

ಧಾರವಾಡದಲ್ಲಿ ಗ್ರಾಮೀಣ ಸಂಘದವರು ಶಿಕ್ಷಣ ಸಚಿವರನ್ನ ಭೇಟಿ ಮಾಡಿದ್ದೇಕೆ…!?

Spread the love

ಧಾರವಾಡ: ವಿದ್ಯಾನಗರಿ ಧಾರವಾಡಕ್ಕೆ ಆಗಮಿಸಿರುವ ಶಿಕ್ಷಣ ಸಚಿವ ಎಸ್.ಸುರೇಶಕುಮಾರ ಅವರನ್ನ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪದಾಧಿಕಾರಿಗಳು ಭೇಟಿ ಮಾಡಿದ್ರು.

ಧಾರವಾಡದ ಜಿಲ್ಲಾಧಿಕಾರಿಗಳ ಕಚೇರಿ ಬಳಿಯಲ್ಲಿರುವ ಸರ್ಕೀಟ್ ಹೌಸ್ ನಲ್ಲಿ ಭೇಟಿಯಾದ ಸಂಘದ ಪದಾಧಿಕಾರಿಗಳು, ಶಿಕ್ಷಕರ ವರ್ಗಾವಣೆಯನ್ನ ಆದಷ್ಟು ಶೀಘ್ರವಾಗಿ ಆರಂಭಿಸಬೇಕೆಂದು ಕೋರಿದರು. ಇದರ ಜೊತೆಗೆ ಪರೀಕ್ಷೆಗಳನ್ನ ನಡೆಸಿ, ಬೇಸಿಗೆ ರಜೆಗೆ ಅವಕಾಶ ಮಾಡಿ ಮಾಡಿಕೊಡುವಂತೆಯೂ ವಿನಂತಿ ಮಾಡಿಕೊಂಡರು.

ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಉಪ್ಪಿನ, ಸಂಘದ ಎಲ್.ಐ.ಲಕ್ಕಮ್ಮನವರ, ಹಲವಾಯಿ, ರವಿ, ಅಜಿತ ಸಿಂಗ ರಜಪೂತ, ಭೀಮಪ್ಪ ಕಸಾಯಿ ಸೇರಿದಂತೆ ಹಲವರು ಉಪಸ್ಥಿತರಿದ್ದು, ಸಚಿವರಿಗೆ ಮನವಿ ಮಾಡಿಕೊಂಡರು.

ಶಿಕ್ಷಕರ ಮನವಿಯನ್ನ ಸ್ವೀಕರಿಸಿ ಮಾತನಾಡಿದ ಸಚಿವ ಸುರೇಶಕುಮಾರ ಅವರು, ಈ ಬಗ್ಗೆ ಶೀಘ್ರವಾಗಿ ತೀರ್ಮಾನವನ್ನ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ತೆಗೆದುಕೊಳ್ಳುವುದಾಗಿ ಹೇಳಿದರು.


Spread the love

Leave a Reply

Your email address will not be published. Required fields are marked *