Posts Slider

Karnataka Voice

Latest Kannada News

ಸದ್ಯದಲ್ಲೇ ಮತ್ತಿಬ್ಬರ ಮಂತ್ರಿಗಳ ಸಿಡಿ ರಿಲೀಸ್…!?

1 min read
Spread the love

ಬೆಂಗಳೂರು: ರಾಜ್ಯದ ಜಲ ಸಂಪನ್ಮೂಲ ಸಚಿವ ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿಯೊಂದು ಬಿಡುಗಡೆಯಾದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಭಾರೀ ಕೋಲಾಹಲ ಎದ್ದಿದೆ. ಇದಿನ್ನೂ ಟ್ರೈಲರ್​ ಅಷ್ಟೇ, ಸದ್ಯದಲ್ಲೇ ಇನ್ನಿಬ್ಬರು ಸಚಿವರ ಸಿಡಿ ಬಿಡುಗಡೆಯಾಗಲಿದೆ ಎನ್ನುವ ಚರ್ಚೆಯೂ ಈಗಾಗಲೇ ರಾಜಕೀಯ ಮೊಗಸಾಲೆಯಲ್ಲಿ ಆರಂಭವಾಗಿದೆ.

ಇನ್ನಿಬ್ಬರು ಸಚಿವರ ಸಿಡಿ ಬಿಡುಗಡೆಯಾಗುವ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷಗಳೆರೆಡೂ ಈ ರೀತಿ ಚರ್ಚೆ ನಡೆಸುತ್ತಿವೆ. ಹಳೇ ಮೈಸೂರು ಭಾಗದ ಒಬ್ಬರು ಮತ್ತು ಉತ್ತರ ಕರ್ನಾಟಕ ಭಾಗದ ಒಬ್ಬ ಸಚಿವರ ಸಿಡಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಯಾವಾಗ ಆ ಸಿಡಿಗಳು ಬಿಡುಗಡೆಯಾಗಲಿವೆ ಎನ್ನುವುದರ ಬಗ್ಗೆ ಕುತೂಹಲವಿದ್ದು, ಭಾರೀ ಚರ್ಚೆ ನಡೆಯುತ್ತಿದೆ.

ಈಗಾಗಲೇ ಉತ್ತರ ಕರ್ನಾಟಕದ ಗದಗ ಜಿಲ್ಲೆಯ ಶಾಸಕರೊಬ್ಬರ ಸಿಡಿ ಹೊರಬಿದ್ದು ದೊಡ್ಡ ಸದ್ದನ್ನ ಮಾಡಿತ್ತು. ಇದಾದ ನಂತರ ಮತ್ತೆ ಉತ್ತರ ಕರ್ನಾಟಕದ ಮಂತ್ರಿಯೊಬ್ಬರದ್ದು ಎನ್ನಲಾದ ಸಿಡಿ ಇದೀಗ ಹೊರಬಂದಿದ್ದು, ಮತ್ತೋಬ್ಬರು ಯಾರು ಎಂಬ ಚರ್ಚೆ ಆರಂಭವಾಗಿದೆ.

ನಾಳೆ ರಾಜ್ಯ ಸಚಿವ ಸಂಪುಟದ ಸಭೆಯಿದ್ದು, ಅದರ ಹಿಂದಿನ ದಿನವೇ ಒಂದು ಮಹತ್ವದ ಬೆಳವಣಿಗೆ ರಾಜ್ಯದಲ್ಲಾಗಿದೆ. ಸಚಿವ ರಮೇಶ್​ ಜಾರಕಿಹೊಳಿ ಅವರು ಸಭೆಗೆ ಬರಲಿದ್ದಾರೆಯೇ ಅಥವಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ. ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ಮುಖ್ಯಮಂತ್ರಿಗಳು ಸಚಿವರ ಅಭಿಪ್ರಾಯ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.  


Spread the love

Leave a Reply

Your email address will not be published. Required fields are marked *