Posts Slider

Karnataka Voice

Latest Kannada News

ಜಾಮೀನಿನ ಮೇಲೆ ಹೊರಬಂದ “ಆರೋಪಿ”ಗೆ ಹಾಲಿನ ಅಭಿಷೇಕ.. ವೀಡಿಯೋ ವೈರಲ್…!!!

1 min read
Spread the love

ಜಾಮೀನು ಪಡೆದು ಹೊರ ಬಂದಿರುವ ಆರೋಪಿ

ಜೈಲಿನಿಂದ ಹೊರ ಬಂದ ಮುಖಂಡನಿಗೆ ಹಾಲಿನ ಅಭಿಷೇಕ

ಬೀದರ: ಪಿಸ್ತೂಲ್ ತೋರಿಸಿ ಹಣ ವಸೂಲಿ ಮಾಡಿದ್ದ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಜಿಲ್ಲಾ ಪಂಚಾಯತ ಮಾಜಿ ಸದಸ್ಯನಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿರುವ ಘಟನೆ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಣಮಂತವಾಡಿ ಗ್ರಾಮದಲ್ಲಿ ನಡೆದಿದೆ.

ವೈರಲ್ ವೀಡಿಯೋ…

ಪಿಸ್ತೂಲ್ ಹಿಡಿದ ಹಣ ವಸೂಲಿ ಮಾಡಿದ ಹಿನ್ನಲೆ ಪೊಲಿಸರು ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದರು. ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಗುಂಡುರಡ್ಡಿ ಜಾಮೀನು ಮೇಲೆ ಹೊರ ಬಂದ ತಕ್ಷಣ ಅವರ ಅಭಿಮಾನಿ ಬಳಗದಿಂದ ಹಾಲಿನ ಅಭಿಷೇಕ ಮಾಡಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಗ್ರಾಮದ ಮಂದಿರದಲ್ಲಿ ಎರಡು ನೂರು ಲೀಟರ್ ಹಾಲಿನಿಂದ ಅಭಿಷೇಕ್ ಮಾಡಿ ಹಾರ ಹಾಕಿ ಗುಂಡುರೆಡ್ಡಿ ಅಭಿಮಾನಿ ಬಳಗ ಸಂತಸಪಟ್ಟಿದೆ.


Spread the love

Leave a Reply

Your email address will not be published. Required fields are marked *