ಉದ್ಯೋಗ ಖಾತರಿ ಯೋಜನೆ-ಉತ್ತಮ ಸಾಧನೆ: ಶಿವಳ್ಳಿ ಪಂಚಾಯತಿಯ ನಾಗೇಶ ಲಾಳಗಿಗೆ ಸತ್ಕಾರ
1 min readಧಾರವಾಡ: ಮಹಾತ್ಮಾ ಗಾಂಧಿ ರಾಷ್ಟ್ರೀಯ ುದ್ಯೋಗ ಖಾತರಿ ಯೋಜನೆಯಡಿ ಉತ್ತಮ ಸಾಧನೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನ ತಾಲೂಕು ಪಂಚಾಯತಿ ಕಚೇರಿಯಲ್ಲಿಂದು ಸ್ವಾತಂತ್ರ್ಯೋತ್ಸವದ ಅಂಗವಾಗಿ ಸತ್ಕರಿಸಲಾಯಿತು.
ತಾಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ ಶಿವಳ್ಳಿ ಗ್ರಾಮ ಪಂಚಾಯತಿ ಮೇಟ್ಸ್ ನಾಗೇಶ ಲಾಳಗಿಯನ್ನ ತಾಲೂಕು ಪಂಚಾಯತಿ ಅಧ್ಯಕ್ಷ ರವಿವರ್ಮಾ ಪಾಟೀಲ ಸೇರಿದಂತೆ ಹಲವರು ಸತ್ಕರಿಸಿದರು.
ಕಾರ್ಯಕ್ರಮದಲ್ಲಿ ಕರಡಿಗುಡ್ಡ ಗ್ರಾಮ ಪಂಚಾಯತಿಯ ಮಹಾಂತೇಶ ಕಬ್ಬೂರ, ಕ್ಯಾರಕೊಪ್ಪ ಗ್ರಾಮ ಪಂಚಾಯತಿಯ ಮಾಯಪ್ಪ ಕೆಂಗಾರಗೆರೆ ಸೇರಿದಂತೆ ರಾಮಾಪುರ ಪಿಡಿಓ ಶಶಿರೇಖಾ ಚಕ್ರಸಾಲಿ, ತಾಂತ್ರಿಕ ಸಹಾಯಕ ಹುಸೇನ ಬಾಗಲದಾರ, ಬಿಎಫ್ ಟಿ ವೀರಪ್ಪ ಅಂಬ್ಲೇಣ್ಣನವರನ್ನೂ ತಾಲೂಕು ಆಡಳಿತ ಸತ್ಕರಿಸಿತು.