Posts Slider

Karnataka Voice

Latest Kannada News

ಪಕ್ಷಾಂತರಿಗಳಿಗೆ ಕಠಿಣ ಶಿಕ್ಷೆ ನೀಡಬೇಕು: ಮಾಜಿ ಸಿಎಂ ಸಿದ್ಧರಾಮಯ್ಯ

1 min read
Spread the love

ಬೆಂಗಳೂರು: ಪಕ್ಷಾಂತರ ನಿಷೇಧ ಕಾಯಿದೆ ಕುರಿತು ನಡೆದ ಸಭೆಯಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಇಂದಿನ ಸಭೆಯಲ್ಲಿ ನಮ್ಮ ಅಭಿಪ್ರಾಯ ಹೇಳಿದ್ದೇವೆ. ಯಾರೇ ಪಕ್ಷಾಂತರಿಗಳು  ಆದರೂ ಎರಡು ಬಾರಿ ಎಲೆಕ್ಸನ್ ಗೆ ನಿಲ್ಲಬಾರದು, ಅವರಿಗೆ ಅಧಿಕಾರ ಕೊಡಬಾರದು ಎಂದಿದ್ದಾರೆ.

ಪಕ್ಷಾಂತರ ವಿಷಯದಲ್ಲಿ ಸ್ಪೀಕರ್ ನಿರ್ಣಯವೇ ಅಂತಿಮವಾಗಬೇಕು. ಈ ವಿಷಯದಲ್ಲಿ ಸ್ಪೀಕರ್  ಗೆ ಸಂಪೂರ್ಣ ಅಧಿಕಾರ ಕೊಡಬೇಕು. ಜೊತೆಗೆ ಇಂಥ ಕೇಸ್ ಗಳು ಮೂರು ತಿಂಗಳ ಒಳಗೆ ಇತ್ಯರ್ಥ ಆಗಬೇಕು. 10ನೇ ಷೆಡ್ಯೂಲ್ ನಲ್ಲಿ ಸ್ಪೀಕರ್ ತೀರ್ಪೇ ಅಂತಿಮವಾಗಿ ಆಗಬೇಕು ಎಂದು ಸಭೆಯಲ್ಲಿ ಹೇಳಿರುವುದಾಗಿ ತಿಳಿಸಿದರು.


Spread the love

Leave a Reply

Your email address will not be published. Required fields are marked *