Posts Slider

Karnataka Voice

Latest Kannada News

ಮೇಯರ್: ರೆಸಾರ್ಟನಲ್ಲಿ “ಪಂಚಮಸಾಲಿ ಸಮಾಜದವರ” ಹೋರಾಟ…!?

1 min read
Spread the love

ದಾಂಡೇಲಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಸ್ಥಾನಕ್ಕಾಗಿ ಭಾರತೀಯ ಜನತಾ ಪಕ್ಷದಲ್ಲಿಯೇ ಗೊಂದಲ ಆರಂಭಗೊಂಡಿದ್ದು, ಪಂಚಮಸಾಲಿ ಸಮಾಜದವರು ತಮಗೆ ನೀಡುವಂತೆ ಕೇಳತೊಡಗಿದ್ದಾರೆ.

ಖಚಿತ ಮಾಹಿತಿಯು ಕರ್ನಾಟಕವಾಯ್ಸ್.ಕಾಂಗೆ ಲಭಿಸಿದ್ದು, ಬಣಜಿಗ ಸಮಾಜದ ಸದಸ್ಯೆಯನ್ನ ಮೇಯರ್ ಮಾಡಲು ನಿರ್ಧರಿಸಿದ್ದಾರಂತೆ. ಆ ಮೂಲಕ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರಿಗೆ ಟಾಂಗ್ ಕೊಡಲು ತಂತ್ರ ರೂಪಿಸಿದ್ದಾರೆ.

ಇದೇ ಸಮಯದಲ್ಲಿ ಬಿಜೆಪಿಯಲ್ಲಿನ ಪಂಚಮಸಾಲಿ ಸಮಾಜದವರನ್ನೇ ಮೇಯರ್ ಮಾಡುವಂತೆ ಒತ್ತಡ ಹೆಚ್ಚಾಗುತ್ತಿದ್ದು, ಇದಕ್ಕೆ ಸದಸ್ಯರು ಕೂಡ ಬೆಂಬಲ ನೀಡುತ್ತಿದ್ದಾರೆಂದು ಗೊತ್ತಾಗಿದೆ.

ಬಿಜೆಪಿಯಿಂದ ಅಧಿಕಾರವನ್ನ ಕಸಿದುಕೊಳ್ಳಬೇಕೆಂದು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿರುವ ಸಮಯದಲ್ಲಿ, ಬಿಜೆಪಿಯಲ್ಲಿ ಪಂಚಮಸಾಲಿ ಸಮಾಜದ ಗೊಂದಲ ಸೃಷ್ಠಿಯಾಗಿದೆ. ಇದು ಮೇಯರ್‌ಗಿರಿಯತ್ತ ಮತ್ತಷ್ಟು ಕುತೂಹಲಕ್ಕೆ ಕಾರಣವಾಗುತ್ತಿದೆ.


Spread the love

Leave a Reply

Your email address will not be published. Required fields are marked *