Posts Slider

Karnataka Voice

Latest Kannada News

ಹೃದಯವಂತ ಮಹೇಂದ್ರ ಕೌತಾಳ: ಮನೆ ಮನೆಗೂ ತಲುಪಲಿದೆ ‘ಹೊಟ್ಟೆ ತುಂಬಿಸುವ ಕಿಟ್’…!

1 min read
Spread the love

ಹುಬ್ಬಳ್ಳಿ: ಕೊರೋನಾ ಸಾಂಕ್ರಾಮಿಕ ರೋಗ ಬಡವರ ಜೀವವನ್ನ ಹಿಂಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದನ್ನ ಹಿಮ್ಮೆಟ್ಟಿಸುವ ಕಾರ್ಯಕ್ಕೆ ಪ್ರತಿ ಮನೆ ಮನೆಗೂ 10 ಬಗೆಯ ವಸ್ತುಗಳೊಂದಿಗೆ ನೀಡಲು ಬಿಜೆಪಿ ಮುಖಂಡ ಮಹೇಂದ್ರ ಕೌತಾಳ ಮುಂದಾಗಿದ್ದಾರೆ.

ರಾಮನಗರ ಹಾಗೂ ಜನತಾ ಕಾಲನಿ ಪ್ರದೇಶದಲ್ಲಿ ಪ್ರತಿ ಮನೆಗೆ ಕೊಡಲು ಈಗಾಗಲೇ 1400 ಕಿಟ್ ಗಳನ್ನ ಸಿದ್ಧ ಮಾಡಿರುವ ಮಹೇಂದ್ರ ಕೌತಾಳ ಅವರು, ಪ್ರತಿ ಕಿಟ್ ನಲ್ಲಿ 5ಕೆಜಿ ಅಕ್ಕಿ, 1ಕೆಜಿ ಜೋಳ, 1ಕೆಜಿ ಸಕ್ಕರಿ, 1 ಕೆಜಿ ರವಾ, 1 ಕೆಜಿ ಅವಲಕ್ಕಿ,  ಅರ್ಧ ಕೆಜಿ ಎಣ್ಣಿ, ಅರ್ಧ ಕೆಜಿ ತೊಗರಿ ಬ್ಯಾಳಿ, 100 ಅರಿಷಣಪುಡಿ, ಜಿರಗಿ, ಸಾಸಿವೆಯನ್ನ ಹೊಂದಿದೆ.

ಕೊರೋನಾ ಸಮಯದಲ್ಲಿ ಬಹುತೇಕ ಕುಟುಂಬಗಳು ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದು, ಇದನ್ನ ಮನಗಂಡ ಮಹೇಂದ್ರ ಕೌತಾಳ, ತಮ್ಮ ಮನೆಯಲ್ಲಿಯೇ ಕಿಟ್ ತಯಾರಿಸುತ್ತಿದ್ದಾರೆ.

ಕಷ್ಟ ಕಾಲದಲ್ಲಿ ಕೈ ಹಿಡಿಯುವವನೇ ದೇವರು ಎಂದು ನಂಬಿಕೊಂಡಿರುವ ಜನರಿಗೆ ಮಹೇಂದ್ರ ಕೌತಾಳ, ಇಂತಹ ಸಮಯದಲ್ಲಿ ಸಹಾಯ ಮಾಡಲು ಮುಂದಾಗಿರುವುದರಿಂದಲೇ ಅವರನ್ನ ಹೃದಯವಂತ ಮಹೇಂದ್ರ ಎನ್ನುವಂತಾಗಿದೆ.


Spread the love

Leave a Reply

Your email address will not be published. Required fields are marked *