ಸರಳಜೀವಿ ಪತ್ರಿಕಾ ಛಾಯಾಗ್ರಾಹಕ ಕೆ.ವೆಂಕಟೇಶ ಅವರನ್ನ ಮಾಧ್ಯಮ ಅಕಾಡೆಮಿ ಸದಸ್ಯರನ್ನಾಗಿಸಿದ ಸರಕಾರ…

ಬೆಂಗಳೂರು: ಕರ್ನಾಟಕದ ಹೆಸರಾಂತ ಹಿರಿಯ ಪತ್ರಿಕಾ ಛಾಯಾಗ್ರಾಹಕ ಸ್ನೇಹಜೀವಿಗಳಾದ K. ವೆಂಕಟೇಶ ಅವರನ್ನ ಕರ್ನಾಟಕ ಸರಕಾರ “ಕರ್ನಾಟಕ ಮಾಧ್ಯಮ ಅಕಾಡೆಮಿ”ಗೆ ಸದಸ್ಯರನ್ನಾಗಿ ನೇಮಿಸಿದೆ.
ವೆಂಕಟೇಶ ಅವರು ಮಾನವೀಯ ಮೌಲ್ಯಗಳ ಬಗ್ಗೆ ಹಾಗೂ ಇನ್ನಿತರ ವಿಷಯಗಳ ಮೇಲೆ Photo Exhibition ಮಾಡಿದ್ದಾರೆ. ಇವರು ನಿರ್ಭಿಡೆಯ ಪತ್ರಿಕಾ ಛಾಯಾಗ್ರಹಕರಾಗಿದ್ದಾರೆ.
ಅತೀ ಸರಳಜೀವಿ ವೆಂಕಟೇಶ ಅವರನ್ನು “ಕರ್ನಾಟಕ ಮಾಧ್ಯಮ ಅಕಾಡೆಮಿ”ಗೆ ಸದಸ್ಯರನ್ನಾಗಿ ನೇಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರಿಗೆ ಹಿರಿಯ ಛಾಯಾಗ್ರಾಹಕ ಬಿ.ಎಂ.ಕೇದಾರ ಅವರು ಧನ್ಯವಾದ ತಿಳಿಸಿದ್ದಾರೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಓರ್ವ ಪತ್ರಿಕಾ ಛಾಯಾಗ್ರಹಕರನ್ನು ಕರ್ನಾಟಕ ಸರಕಾರ “ಕರ್ನಾಟಕ ಮಾಧ್ಯಮ ಅಕಾಡೆಮಿ”ಗೆ ಸದಸ್ಯರನ್ನಾಗಿ ನೇಮಿಸಿದೆ.
ವೆಂಕಟೇಶ ಅವರ website
www.beyondfocus.in