ಹುಬ್ಬಳ್ಳಿಯ ಸುತಗಟ್ಟಿ ಬಳಿ “ಪಾಲಿಕೆ ಸದಸ್ಯನ ಸಂಬಂಧಿ”ಯ ಕೊಲೆ…

ಹುಬ್ಬಳ್ಳಿ: ನವನಗರಕ್ಕೆ ಹುಡುಗಿಯನ್ನ ಕರೆದುಕೊಂಡು ಹೋಗಿದ್ದ ಯುವಕನನ್ನ ಕರೆದುಕೊಂಡು ಹೋಗಿ ಹತ್ಯೆ ಮಾಡಿರುವ ಪ್ರಕರಣವೊಂದು ಸುತಗಟ್ಟಿಯ ಖಾಸಗಿ ಲೇ ಔಟ್ ನಲ್ಲಿ ನಡೆದಿದೆ.

ಕೊಲೆಯಾಗಿರುವ ವಿದ್ಯಾರ್ಥಿಯನ್ನ ಮಹಾನಗರ ಪಾಲಿಕೆ ಸದಸ್ಯ ಮೋಹನ ಹಿರೇಮನಿ ಸಂಬಂಧಿಯಾದ ವಿನಾಯಕ ಮೇಘರಾಜ ಎಂದು ಗುರುತಿಸಲಾಗಿದ್ದು, ಧಾರವಾಡದ ಕಾಲೇಜೊಂದರಲ್ಲಿ ಡಿಪ್ಲೋಮಾ ಮಾಡುತ್ತಿದ್ದನೆಂದು ಗೊತ್ತಾಗಿದೆ.
ಮಾಹಿತಿಯ ಪ್ರಕಾರ ರಾಘವೇಂದ್ರ ಎಂಬಾತ ಪ್ರೇಮಿಸುತ್ತಿದ್ದ ಯುವತಿಯೊಂದಿಗೆ ವಿನಾಯಕ ಸಲುಗೆಯಿಂದ ಇದ್ದ. ಇದೇ ಕಾರಣಕ್ಕೆ ರಾಘವೇಂದ್ರ ಕೊಲೆ ಮಾಡಿದ್ದಾನೆಂದು ಗೊತ್ತಾಗಿದ್ದು, ಆರೋಪಿಯನ್ನ ನವನಗರ ಎಪಿಎಂಸಿ ಠಾಣೆ ಪೊಲೀಸರು ಬಂಧಿಸಿದ್ದಾರೆ.