ಕೈ ಕೈ ಹಿಡಿದು ಪ್ರಾಣ ಬಿಟ್ಟ ಪ್ರೇಮಿಗಳು…!
1 min readಹಾವೇರಿ: ಜೀವನದಲ್ಲಿ ನಾವೂ ಯಾರಿಗೂ ಹೆದರುವುದು ಬೇಡ. ನಮಗೆ ವಿರೋಧ ಮಾಡಿದರೂ, ಎಲ್ಲರೂ ಅಚ್ಚರಿಪಡುವಂತೆ ಬದುಕೋಣ ಎಂದು ಕನಸು ಕಾಣುತ್ತಿದ್ದ ಯುವ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಬಳಿ ನಡೆದಿದೆ.
ನಿನ್ನೆ ಬೆಳಗಿನ ಜಾವ ಮನೆಯಿಂದ ನಾಪತ್ತೆಯಾಗಿದ್ದ ವಿದ್ಯಾಶ್ರೀ ಗಾಳಿ ಎಂಬ 22 ವರ್ಷದ ಯುವತಿ, 23 ವರ್ಷದ ಇರ್ಷಾದ ಕುಡಚಿಯ ಕೈ ಹಿಡಿದುಕೊಂಡೇ ಸಾವಿಗೀಡಾಗಿದ್ದಾಳೆ. ಇಬ್ಬರ ಶವಗಳು ವಿಷ ಸೇವಿಸಿ ಸಾವಿಗೀಡಾದ ರೀತಿಯಲ್ಲಿ ಪತ್ತೆಯಾಗಿವೆ.
ವಿದ್ಯಾಶ್ರೀ ಗಾಳಿ ಕುಟುಂಬದವರು ನಿನ್ನೆ ತಮ್ಮ ಮಗಳು ಕಾಣೆಯಾಗಿದ್ದಳೆಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಭಯಗೊಂಡು ಹೀಗೆ ಮಾಡಿಕೊಂಡರಾ ಎಂಬುದು ಪತ್ತೆಯಾಗಬೇಕಿದೆ.
ಕೆಲವು ತಿಂಗಳುಗಳಿಂದ ವಿದ್ಯಾಶ್ರೀ ಹಾಗೂ ಇರ್ಷಾದ ಪ್ರೀತಿಯಲ್ಲಿ ಪ್ರಾಣವನ್ನ ಕೊಡುವಷ್ಟು ಒಂದಾಗಿದ್ದರೆಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಹಾವೇರಿ ಗ್ರಾಮೀಣ ಸಿಪಿಐ ನಾಗಮ್ಮ ಹಾಗೂ ಮಹಿಳಾ ಠಾಣೆಯ ಸಿಪಿಐ ಚಿದಾನಂದ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.