ಪ್ರೀತಿ ಪ್ರೇಮಕ್ಕಾಗಿ ತುಂಡು ತುಂಡಾದ ಅಮರಗೋಳದ “ಪಾಗಲ್ ಪ್ರೇಮಿ”…!?

ಮೃತ ಯುವಕನ ತಂದೆ ಹಾಲಿ ಸಿಎಂ ಬಸವರಾಜ ಬೊಮ್ಮಾಯಿಯವರ ತಂದೆ-ತಾಯಿಗಳ ಸಮಾಧಿಯನ್ನ ಕಾಯುತ್ತಾರೆ…
ಹುಬ್ಬಳ್ಳಿ: ತಾನು ಪ್ರೀತಿಸುವ ಹುಡುಗಿ ತನ್ನೊಂದಿಗೆ ಪ್ರೀತಿಯನ್ನ ಹಂಚಿಕೊಳ್ಳುತ್ತಿಲ್ಲವೆಂದು ಬೇಸರಿಸಿಕೊಂಡು ಯುವಕನೋರ್ವ ರೇಲ್ವೆ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು, ಯುವಕನ ದೇಹ ತುಂಡು ತುಂಡಾಗಿದೆ.

ಪಿಯುಸಿವರೆಗೆ ಓದಿದ್ದ ಬಸಯ್ಯ ವಸ್ತ್ರದ ಎಂಬ ಯುವಕನೇ ಅಮರಗೋಳದ ಬಳಿಯ ರೇಲ್ವೆ ಹಳಿಯಲ್ಲಿ ಬಿದ್ದು ಸಾವಿಗೀಡಾಗಿದ್ದಾನೆ. ಬಸಯ್ಯ, ಪಕ್ಕದ ಪ್ರದೇಶದ ಯುವತಿಯೊಂದಿಗೆ ಪ್ರೀತಿ ಮಾಡುತ್ತಿದ್ದನೆಂದು ಹೇಳಲಾಗಿದೆ. ಆಕೆ, ಈತನನ್ನ ನಿರಾಕರಣೆ ಮಾಡಿದ್ದರಿಂದಲೇ ಹೀಗೆ ಮಾಡಿಕೊಂಡಿರಬಹುದೆಂದು ಹೇಳಲಾಗಿದೆ.
ಬಸಯ್ಯ, ಜಿಮ್ ಗೆ ಹೋಗುತ್ತಿದ್ದರಿಂದ ಅವನಿಗೆ ಇನ್ಸಸ್ಟ್ರಾಗ್ರಾಂನಲ್ಲಿ 9 ಸಾವಿರ ಪಾಲೋವರ್ಸ್ ಇದ್ದರೆಂದು ಹೇಳಲಾಗಿದೆ. ಅಷ್ಟೇ ಅಲ್ಲ, ಈತನ ತಂದೆ ಹಾಲಿ ಸಿಎಂ ಬಸವರಾಜ ಬೊಮ್ಮಾಯಿಯವರ ತಂದೆ-ತಾಯಿಯವರನ್ನ ಅಂತ್ಯಕ್ರಿಯೆ ಮಾಡಿದ ಸ್ಥಳವನ್ನ ಕಾಯುತ್ತಿರುತ್ತಾರೆ ಎಂದು ಗೊತ್ತಾಗಿದೆ.

ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಲ್ವೆ ಠಾಣೆಯ ಪೊಲೀಸರು ಪ್ರಕರಣವನ್ನ ದಾಖಲು ಮಾಡಿಕೊಂಡು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.