Posts Slider

Karnataka Voice

Latest Kannada News

ಏಕ್ ಚೋಟಿಸಿ ಲವ್ ಸ್ಟೋರಿಗೆ “ದಿ ಎಂಡ್” ಬರೆದ ಬಾಪ್ ನಂಬರಿ…!

1 min read
Spread the love

ವಿಜಯಪುರ: ಅವರಿಬ್ಬರು ಜೀವನದಲ್ಲಿ ಇನ್ನೂ ಏನೂ ಕಾಣದೇ ಇದ್ದರೂ ಪ್ರೀತಿಯನ್ನ ಕಾಣತೊಡಗಿದ್ದರು. ಅದೇ ಕಾರಣಕ್ಕೆ ವಯಸ್ಸಲ್ಲದ ವಯಸ್ಸಿನಲ್ಲಿ ಪ್ರೀತಿಗೆ ಶರಣಾಗಿದ್ದರು. ಆದರೆ, ದುರ್ವೀಧಿ ಮಾಡಿದ್ದೆ ಬೇರೆ, ಲೋಕ ಕಾಣುವ ಮುನ್ನವೇ ಅವರಿಬ್ಬರನ್ನು ಕೊಲೆ ಮಾಡಲಾಗಿದೆ.

ಹೌದು.. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಸಲಾದಹಳ್ಳಿಯಲ್ಲಿ ಗ್ರಾಮದ ನಿವಾಸಿ ಬಸವರಾಜ ಬಡಿಗೇರಿ (19) ಹಾಗೂ ಖಾನಾಪುರ ಗ್ರಾಮದ 16ರ್ಷದ ಅಪ್ರಾಪ್ತ ಬಾಲಕಿಯನ್ನ ಹತ್ಯೆ ಮಾಡಲಾಗಿದೆ.

ಬಸವರಾಜ ಹಾಗೂ ಅಪ್ರಾಪ್ತೆ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ರು. ಇಬ್ಬರೂ ಅನ್ಯ ಕೋಮಿನವರಾಗಿದ್ದರಿಂದ ಅಪ್ರಾಪ್ತೆ ಮನೆಯಲ್ಲಿ ವಿರೋಧವಿತ್ತು. ಇಬ್ಬರೂ ಸೇರಿದ್ದ ಸಮಯದಲ್ಲಿ ಕಲ್ಲಿನಿಂದ ಜಜ್ಜಿ ಅಪ್ರಾಪ್ತೆಯ ತಂದೆ ಹತ್ಯೆ ಮಾಡಿದ್ದಾನೆ.

ಸಲಾದಹಳ್ಳಿ ಹಾಗೂ ಖಾನಾಪುರ ಅಕ್ಕಪಕ್ಕದ ಗ್ರಾಮಗಳಾಗಿದ್ದರಿಂದ ಇಬ್ಬರಿಗೂ ಪರಿಚಯವಾಗಿತ್ತು. ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ಜಾಲ ಬೀಸಲಾಗಿದೆ.


Spread the love

Leave a Reply

Your email address will not be published. Required fields are marked *