Posts Slider

Karnataka Voice

Latest Kannada News

ಅಗ್ರಿ ಯೂನಿವರ್ಸಿಟಿ ಬಳಿ ಪಲ್ಟಿಯಾಗಿದ್ದು ಸಿಮೆಂಟ್ ಮಿಕ್ಸರ್ ಲಾರಿ..!

Spread the love

ಧಾರವಾಡ: ನಗರದ ಬೆಳಗಾವಿ ರಸ್ತೆಯಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಮುಂಭಾಗ ಸಿಮೆಂಟ್ ತುಂಬಿದ ಮಿಕ್ಸರ್ ಲಾರಿಯು ಡಿವೈಡರಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ನಡೆದಿದೆ.

ಹೊಸಪೇಟೆ ಮೂಲದ ಮೊಹ್ಮದಜಾಫರ ಬಡೇಸಾಬ ಎಂಬ ಚಾಲಕ ಮಧ್ಯರಾತ್ರಿ  2 ಗಂಟೆ ಸುಮಾರಿಗೆ ಲಾರಿಯ ಹ್ಯಾಂಡಲ್ ಲಾಕ್ ಆದ ಪರಿಣಾಮ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಲಾರಿಯು ರಸ್ತೆಯಲ್ಲೇ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ಮಾಹಿತಿ ಸಿಗುತ್ತಿದ್ದ ಹಾಗೇ ಸ್ಥಳಕ್ಕೆ ದೌಡಾಯಿಸಿದ ಧಾರವಾಡ ಸಂಚಾರಿ ಠಾಣೆಯ ಪೊಲೀಸರು, ರಸ್ತೆಯ ಮಾರ್ಗವನ್ನ ಬದಲಾವಣೆ ಮಾಡಿ, ಬೇರೆ ವಾಹನಗಳಿಗೆ ಅನುಕೂಲ ಮಾಡಿದ್ದಾರೆ.

ಈಗಾಗಲೇ ವಾಹನವನ್ನ ಕ್ರೇನ್ ಮೂಲಕ ರಸ್ತೆ ಪಕ್ಕದಲ್ಲಿ ನಿಲ್ಲಿಸುವ ಪ್ರಯತ್ನವನ್ನ ಮಾಡುತ್ತಿದ್ದು, ಘಟನೆಗೆ ಸಂಬಂಧಿಸಿದಂತೆ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *