ಧಾರವಾಡ ಲೋಕಾಯುಕ್ತ ಎಸ್ಪಿ ವಿಜಯಕುಮಾರ ಬಿಸನಳ್ಳಿಯವರಿಂದ ಶಾಲೆಗಳಿಗೆ ಬಿಗ್ ಶಾಕ್…!
1 min readಧಾರವಾಡ: ರಾಜ್ಯ ಸರಕಾರ ಕೋವಿಡ್ ನಿಯಮಗಳನ್ನ ಪಾಲನೆ ಮಾಡುವಂತೆ ನೀಡಿರುವ ಆದೇಶವನ್ನ ಶಾಲಾ ಕಾಲೇಜುಗಳು ನಿರ್ವಹಣೆ ಮಾಡುತ್ತಿವೆಯಾ ಅಥವಾ ಇಲ್ಲವೋ ಎಂಬುದನ್ನ ತಿಳಿಯಲು ಧಾರವಾಡ ಲೋಕಾಯುಕ್ತ ಅಧಿಕಾರಿಗಳು ಇಂದು ಹಲವು ಶಾಲೆ-ಕಾಲೇಜುಗಳಿಗೆ ದಿಢೀರ್ ಭೇಟಿ ನೀಡಿದರು.
ಆರ್.ಎನ್.ಶೆಟ್ಟಿ ಕ್ರೀಡಾಂಗಣದ ಬಳಿಯ ಸರಕಾರಿ ಪ್ರೌಢ ಶಾಲೆ, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಶ್ರೀಮತಿ ಕ.ಶಿ.ಜಿಗಳೂರ ಕಲಾ ಹಾಗೂ ಶ್ರೀಮತಿ ಎಸ್.ಎಂ.ಶೇಷಗಿರಿ ವಾಣಿಜ್ಯ ಮಹಿಳಾ ಮಹಾವಿದ್ಯಾಲಯಕ್ಕೆ ಭೇಟಿ ನೀಡಿದರು.
ಧಾರವಾಡ ಲೋಕಾಯುಕ್ತ ಎಸ್ಪಿ ವಿಜಯಕುಮಾರ ಬಿಸನಳ್ಳಿ, ಪೊಲೀಸ್ ಉಪಾಧೀಕ್ಷಕ ಎಚ್.ಕೆ.ಪಠಾಣ, ಸಿಬ್ಬಂದಿಗಳಾದ ಆರ್.ಕೆ.ಕೊಪ್ಪದ, ವಿ.ಎಲ್.ಕುಲಕರ್ಣಿ, ಎ.ಎಂ.ಉಳ್ಳಿಗೇರಿ ಪರಿಶೀಲನೆ ನಡೆಸಿದರು.
ಅನಿರೀಕ್ಷಿತ ಭೇಟಿ ನೀಡಿದ ಮೇಲೆ ಲೋಕಾಯುಕ್ತ ಅಧೀಕ್ಷಕ ವಿಜಯಕುಮಾರ ಬಿಸನಳ್ಳಿ, ಸರಕಾರದ ಮಾರ್ಗಸೂಚಿಗಳನ್ನ ಪಾಲಿಸಬೇಕು. ಕೋವಿಡ್ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.