Posts Slider

Karnataka Voice

Latest Kannada News

ಗ್ಯಾಂಬ್ಲಿಂಗ್‌ ಪರ್ಮಿಷನ್: ತಡಸ ಪಿಎಸ್ಐ ಶರಣಬಸಪ್ಪ ಲೋಕಾಯುಕ್ತ ಬಲೆಗೆ…

1 min read
Spread the love

ಅಂದರ್-ಬಾಹರ್ ಪರವಾನಿಗೆಗೆ ಐದು ಲಕ್ಷ ರೂಪಾಯಿ ಡಿಮ್ಯಾಂಡ್..

ಹಾವೇರಿ: ಜಿಲ್ಲೆಯ ತಡಸ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗ್ಯಾಂಬಲಿಂಗ್​ಗೆ ಅನುಮತಿ ₹2 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಪಿಎಸ್ಐ ಮತ್ತು ಕಾನ್‌ಸ್ಟೇಬಲ್ ಬಿದ್ದಿದ್ದಾರೆ.
ತಡಸ ಪೊಲೀಸ್ ಠಾಣೆಯ ಪಿಎಸ್ಐ ಶರಣಬಸಪ್ಪ ಮತ್ತು ಕಾನ್‌ಸ್ಟೇಬಲ್ ಸುರೇಶ ಬಂಧಿತರು. ಜೂಜು ಆಡಿಸುವ ಸಂಬಂಧ ಪ್ರಭಾಕರ ಎನ್ನುವವರಿಂದ ₹5 ಲಕ್ಷ ಲಂಚದ ಬೇಡಿಕೆ ಇಟ್ಟಿದ್ದರು.


ಮಧ್ಯವರ್ತಿ ಕಿರಣ ವನಹಳ್ಳಿ ಮೂಲಕ ₹2 ಲಕ್ಷ ಮುಂಗಡ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಹಾವೇರಿ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು.


Spread the love

Leave a Reply

Your email address will not be published. Required fields are marked *