Posts Slider

Karnataka Voice

Latest Kannada News

“5ಸಾವಿರ ಲಂಚ” ಉಪತಹಶೀಲ್ದಾರ, ತಲಾಠಿ ಲೋಕಾಯುಕ್ತ ಬಲೆಗೆ…

1 min read
Spread the love

ಐದು ಸಾವಿರ ರೂಪಾಯಿಗೆ ಬೇಡಿಕೆಯಿಟ್ಟಿದ್ದ ಅಧಿಕಾರಿಗಳು

ರಾಜಕುಮಾರ ಶಿಂಧೆ ಎಂಬುವವರಿಂದ ಲೋಕಾಯುಕ್ತಕ್ಕೆ ದೂರು

ನಿಪ್ಪಾಣಿ: ಐದು ಸಾವಿರ ರೂಪಾಯಿ ಲಂಚ ಪಡೆಯುವಾಗ ನಿಪ್ಪಾಣಿ ಉಪತಹಶೀಲ್ದಾರ್ ಅಭಿಜೀತ ಭೋಂಗಾಳೆ ಹಾಗೂ ಗ್ರಾಮ ಲೆಕ್ಕಿಗ ಪಾರೇಶ ಸತ್ತಿ ಲೋಕಾ‌ಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಆಸ್ತಿ ಹೆಸರು ಬದಲಾವಣೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಅಧಿಕಾರಿಗಳು, ರಾಜಕುಮಾರ್ ತುಕಾರಾಮ್ ಶಿಂಧೆ ಎಂಬುವವರಿಂದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಈ ಕುರಿತು ಲೋಕಾಯುಕ್ತರಿಗೆ ದೂರು ನೀಡಿದ್ದ ರಾಜಕುಮಾರ,
ಬುಧವಾರ ಲಂಚ‌ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಅಧಿಕಾರಿಗಳು ಸಿಕ್ಕು ಬಿದ್ದಿದ್ದಾರೆ.

ರಾಜಕುಮಾರ ಶಿಂಧೆಯವರಿಗೆ ಹಣಕ್ಕಾಗಿ ಸಾಕಷ್ಟು ಪೀಡಿಸಿದ್ದರಿಂದ ಅವರು ಲೋಕಾಯುಕ್ತದ ಮೊರೆ ಹೋಗಿದ್ದರೆಂದು ಗೊತ್ತಾಗಿದೆ.


Spread the love

Leave a Reply

Your email address will not be published. Required fields are marked *