ಲೋಕಾಯುಕ್ತ ರೇಡ್: ಠಾಣೆಯಿಂದ PI, PSI ಪರಾರಿ- ಅನಾಥವಾದ ಪೊಲೀಸ್ ಠಾಣೆ….!
1 min readಐವತ್ತು ಸಾವಿರ ರೂಪಾಯಿ ಲಂಚದ ಬೇಡಿಕೆ
ಹೆಡ್ಕಾನ್ಸಟೇಬಲ್ ಬಲೆಗೆ, ಪ್ರಮುಖರು ಪರಾರಿ
ಬೆಂಗಳೂರು: ರಾಜಾಜಿನಗರದ ಪೊಲೀಸ್ ಠಾಣೆಯಲ್ಲಿ ಲೋಕಾಯುಕ್ತ ದಾಳಿ ನಡೆದಿದ್ದು, ಇನ್ಸಪೆಕ್ಟರ್, ಸಬ್ ಇನ್ಸಪೆಕ್ಟರ್ ಪರಾರಿಯಾಗಿದ್ದು, ಹೆಡ್ಕಾನ್ಸಟೇಬಲ್ ಲೋಕಾಯುಕ್ತ ಬಲೆಗೆ ಸಿಕ್ಕಿದ್ದಾರೆ.
ಶ್ರೀಸಾಗರ ಎಂಬುವವರ ಬಳಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಿ ರಿಪೋರ್ಟ್ ಹಾಕಲು ಹಣದ ಬೇಡಿಕೆಯಿಟ್ಟಿದ್ದ ಇನ್ಸಪೆಕ್ಟರ್ ಲಕ್ಷ್ಮಣ ನಾಯಕ, ಸಬ್ ಇನ್ಸಪೆಕ್ಟರ್ ಮಾರುತಿ ಹಾಗೂ ಹೆಡ್ಕಾನ್ಸಟೇಬಲ್ ಆಂಜನೇಯ.
ಹಣವನ್ನ ನೀಡಲು ಬಂದಾಗ ಆಂಜನೇಯ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಪಿಐ ಮತ್ತು ಪಿಎಸ್ಐ ಪರಾರಿಯಾಗಿದ್ದಾರೆ. ದಾಳಿಯು ಲೋಕಾಯುಕ್ತ ಎಸ್ಪಿ ಶ್ರೀನಿವಾಸನ್ ನೇತೃತ್ವದಲ್ಲಿ ನಡೆದಿದೆ.