ಇ-ಸ್ವತ್ತಿಗಾಗಿ ’10 ಸಾವಿರ’ ಲಂಚ: ಪಿಡಿಓ ಲೋಕಾಯುಕ್ತ ಬಲೆಗೆ…

ಚಿತ್ರದುರ್ಗ: ಸರಕಾರದ ಯೋಜನೆಯ ಇ ಸ್ವತ್ತು ಮಾಡಿಕೊಡಲು ಲಂಚದ ಬೇಡಿಕೆಯಿಟ್ಟಿದ್ದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ತಿಪ್ಪೆಸ್ವಾಮಿ ಎಂಬುವವರಿಗೆ ಪಿಡಿಓ ಹತ್ತು ಸಾವಿರ ರೂಪಾಯಿಯ ಲಂಚದ ಬೇಡಿಕೆಯಿಟ್ಟಿದ್ದ. ಈ ಬಗ್ಗೆ ಲೋಕಾಯುಕ್ತರು ದೂರು ಪಡೆದು ತನಿಖೆ ನಡೆಸುತ್ತಿದ್ದಾಗ ಪಿಡಿಓ ಸುರೇಶ ಹಣದ ಸಮೇತ ಬಲೆಗೆ ಬಿದ್ದಿದ್ದಾನೆ.
ಬೆಳಗಟ್ಟ ಗ್ರಾಮ ಪಂಚಾಯತಿ ಪಿಡಿಓ ಲೋಕಾಯುಕ್ತ ಬಲೆಗೆ
ಚಿತ್ರದುರ್ಗ ತಾಲೂಕಿನ ಬೆಳಗಟ್ಟ ಗ್ರಾಮ ಪಂಚಾಯತಿ
ಬೆಳಗಟ್ಟ ಗ್ರಾ.ಪಂ ಪಿಡಿಓ ಸುರೇಶ್ ಲೋಕಾಯುಕ್ತ ಬಲೆಗೆ
ಇ-ಸ್ವತ್ತು ಮಾಡಿಕೊಡಲು 10ಸಾವಿರ ರೂ. ಲಂಚಕ್ಕೆ ಬೇಡಿಕೆ
ಬೆಳಗಟ್ಟ ಗ್ರಾಮದ ತಿಪ್ಪೇಸ್ವಾಮಿ ಬಳಿ ಲಂಚ ಸ್ವೀಕಾರ ವೇಳೆ ಲೋಕಾಯುಕ್ತ ಬಲೆಗೆ
ಲೋಕಾಯುಕ್ತ ಎಸ್ಪಿ ವಾಸುದೇವ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ
ಲೋಕಾಯುಕ್ತ ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ಕಾರ್ಯಾಚರಣೆ