“BJP”ಯಿಂದ ಸಾಲು ಸಾಲು ಲಿಂಗಾಯತರಿಗೆ ಅನ್ಯಾಯ- 12:15 ನಿಮಿಷದ ವೀಡೀಯೋದಲ್ಲಿ ಸ್ಪೋಟಕ ಮಾಹಿತಿ ಬಹಿರಂಗ….

ಹುಬ್ಬಳ್ಳಿ: ಭಾರತೀಯ ಜನತಾ ಪಕ್ಷವನ್ನ ಲಿಂಗಾಯತರ ಪಕ್ಷವೆಂದೇ ಕರೆಯುತ್ತಿದ್ದರು. ಆದರೆ, ಅದೇ ಬಿಜೆಪಿಯಲ್ಲಿ ಇದೀಗ ಲಿಂಗಾಯತರಿಗೆ ನಿರಂತರ ಅನ್ಯಾಯ ಆಗುತ್ತಿದೆ ಎಂದು ಬಿಜೆಪಿಯ ವಿರೋಧ ಪಕ್ಷದ ನಾಯಕ ಪ್ರದೀಪ ಶೆಟ್ಟರ ಬೇಸರ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರೊಂದಿಗೆ ಸದಾಕಾಲ ಅಂತರ ಕಾಯ್ದುಕೊಂಡಿರುತ್ತಿದ್ದ ಪ್ರದೀಪ ಶೆಟ್ಟರ ಅವರು, ಬಿಜೆಪಿಯಲ್ಲಿ ನಡೆಯುತ್ತಿರುವುದನ್ನ ಎಳೆ ಎಳೆಯಾಗಿ ಬಿಚ್ಚಿಟ್ಟರು.
ಪೂರ್ಣ ವೀಡಿಯೋ ನೋಡಿ…
ಆಗುತ್ತಿರುವುದನ್ನ ತಡೆಯಬೇಕು. ಇಲ್ಲದಿದ್ದರೇ ಬಿಜೆಪಿಗೆ ಬಹಳ ಕಷ್ಟವಾಗತ್ತೆ ಎಂದ ಪ್ರದೀಪ ಶೆಟ್ಟರ್ ಅವರು, ಪ್ರಲ್ಹಾದ ಜೋಶಿಯವರು ಮಾತನಾಡಿರುವ ಬಗ್ಗೆಯೂ ಉಲ್ಲೇಖಿಸಿದರು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕೂಡಾ ಬಿಜೆಪಿಯನ್ನ ಹಿರಿಯರಾದ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಮುನ್ನಡೆಸಿಕೊಂಡು ಹೋಗಬೇಕೆಂದು ಕಳೆದ ಸೋಮವಾರ ಕೇಳಿಕೊಂಡಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.