“ಜೀವಾತ್ಮ”ಗಳು ಕೊನೆಗೆ ಹೋಗುವ ಸ್ಥಳ ಯಾವುದು ಗೊತ್ತಾ….!?

ಧಾರವಾಡ: ಮನುಷ್ಯನಾದವನು ಜೀವನದಲ್ಲಿ ಓಡುತ್ತ ಓಡುತ್ತ ಮುಟ್ಟುವ ಜಾಗವನ್ನೇ ತಲುಪಬೇಕು. ಆಗಲೇ ಮುಕ್ತಿ ಸಿಗುತ್ತದೆ ಎಂದು ನವಲಗುಂದ ತಾಲೂಕಿನ ಶಿರಕೋಳ ಹಿರೇಮಠದ ಪಟ್ಟಾಧ್ಯಕ್ಷರಾದ ಷ.ಬ್ರ. ಗುರುಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಆಧ್ಯಾತ್ಮಿಕ ಪ್ರವಚನದಲ್ಲಿ ನುಡಿದರು.
ಧಾರವಾಡದ ಕೊಪ್ಪದಕೇರಿ ಶಿವಾಲಯದಲ್ಲಿ ಶ್ರಾವಣ ಮಾಸದ ನಿಮಿತ್ತ ಇಂದಿನಿಂದ ಆರಂಭಗೊಂಡ ಪ್ರವಚನದಲ್ಲಿ ಶ್ರೀಗಳು ಮಾತನಾಡಿದರು.
ಶಿವಾಲಯದಲ್ಲಿ ನಡೆದ ಪ್ರವಚನದ ವೇಳೆ ಡಾ.ರಾಮನಗೌಡರ ಸೇರಿದಂತೆ ಹಲವು ಭಕ್ತರು ಭಾಗವಹಿಸಿದ್ದರು.