ಬೇರೆಯವರು ಬರೆದು ಕುಂದಗೋಳಮಠ ಕಡೆಯಿಂದ ಕಳಿಸಿದ್ದಾರೆ: MLC ಪ್ರದೀಪ ಶೆಟ್ಟರ್ ಸ್ಪೋಟಕ ಹೇಳಿಕೆ..

ಹುಬ್ಬಳ್ಳಿ: ಮಾಧ್ಯಮದವರಿಗೆ ಕಳಿಸಿರುವ ಪ್ರಕಟಣೆಯನ್ನ ಬೇರೆಯವರು ಬರೆದು ಜಿಲ್ಲಾಧ್ಯಕ್ಷರ ಮೂಲಕ ಕಳಿಸಿದ್ದಾರೆ. ಇದರ ಹಿಂದೆ ಬೇರೆಯವರದ್ದೆ ಕೈವಾಡವಿದೆ ಎಂದು ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಹೇಳಿದ್ದಾರೆ.
ಪಕ್ಷದಲ್ಲಿ ಆಂತರಿಕವಾಗಿ ಎಲ್ಲವೂ ಸರಿಯಿಲ್ಲ ಎಂಬುದನ್ನ ಮತ್ತೆ ಹೇಳಿದ ಪ್ರದೀಪ ಶೆಟ್ಟರ್ ಅವರು, ಮುಂದಿನ ದಿನಗಳಲ್ಲಿ ಇದನ್ನ ಮಾಡುತ್ತಿರುವುದು ಯಾರು ಎಂದು ಹೇಳುತ್ತೇನೆ ಎಂದರು.
ಪೂರ್ಣ ವೀಡಿಯೋ ಇಲ್ಲಿದೆ…
ಪ್ರದೀಪ ಶೆಟ್ಟರ್ ಅವರಿಗೆ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಮಾತನಾಡಿ, ತಮಗೂ ಅನ್ಯಾಯ ಆಗಿದೆ ಎಂದು ಹೇಳಿಕೊಂಡಿರುವುದನ್ನ ಬಹಿರಂಗಪಡಿಸಿದರು.