ಧಾರವಾಡ ಮುರುಘಾಮಠ ಸ್ವಾಮೀಜಿಯದ್ದು ಮರ್ಡರ್ ಆಗಿತ್ತಾ… “ಕುಂದಗೋಳದವರು” ಹೇಳಿದ್ದೇನು…!?

ಧಾರವಾಡ: ಮಾಜಿ ಸಚಿವ ವಿನಯ ಕುಲಕರ್ಣಿಯವರ ಮನೆಗೆ ಅವರ ಹಾಗೂ ಅವರ ಮಡದಿಯ ಹೆಸರಿನಲ್ಲಿ ಅನಾಮಧೇಯ ಪತ್ರಗಳು ಬಂದಿದ್ದು, ಹೊಸದೊಂದು ಚರ್ಚೆಗೆ ಕಾರಣವಾಗಿದ್ದಲ್ಲದೇ, ಈ ವಿಷಯವೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಕುಂದಗೋಳದವರು ಎಂದು ಹೇಳಿಕೊಂಡು ಬರೆದಿರುವ ಅನಾಮಧೇಯ ಪತ್ರದಲ್ಲಿ ಧಾರವಾಡದ ಮುರುಘಾಮಠದಿಂದ ಹೊರಗೆ ಹಾಕಲ್ಪಟ್ಟಿದ್ದ ಶ್ರೀ ಶಿವಯೋಗಿ ಮಹಾಸ್ವಾಮಿಜೀಗಳ ಕೊಲೆ ಆಗಿದೆ ಎಂಬ ಅಂಶದ ಬಗ್ಗೆ ಚರ್ಚೆ ನಡೆದಿದೆ ಎಂದು ವಿವರಣೆ ನೀಡಲಾಗಿದೆ.
ಪತ್ರದ ಪ್ರತಿ ಇಲ್ಲಿದೆ ನೋಡಿ…
ಈ ಬಗ್ಗೆ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಧರ್ಮಪತ್ನಿ ಶಿವಲೀಲಾ ಅವರು ನೀಡಿರುವ ಹೇಳಿಕೆ ಇಲ್ಲಿದೆ.
ಈ ಬಗ್ಗೆ ಪೊಲೀಸರು ಸಮಗ್ರವಾದ ತನಿಖೆಯನ್ನ ಮಾಡಬೇಕಿದ್ದು, ಪತ್ರದ ಮೂಲಕ ತೇಜೋವಧೆಗೆ ನಿಂತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ.