ಮಹಿಳಾ ಠಾಣೆಯ “ಸೋಗಿಯ ಸೋಗು” ಮುಚ್ಚಿಡಲು ಕಾರಣವೇನು ಎಸ್ಪಿ ಸಾಹೇಬ್ರೇ…!?

ಧಾರವಾಡ: ಮೊದಲ ಗಂಡ ತೀರಿಕೊಂಡು, ಮತ್ತೊಬ್ಬನ ಜೊತೆ ಮದುವೆಯಾಗುವ ಮುನ್ನ ಆಟೋ ಚಾಲಕನೊಂದಿಗೆ ಮದುವೆಯಾಗುವ ಕನಸು ಕಂಡಿದ್ದ ಮಹಿಳೆಯೋರ್ವಳು ಯೂಟ್ಯೂಬ್ ಪತ್ರಕರ್ತನ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸುವ ಮುನ್ನವೇ, ಪೊಲೀಸನೋರ್ವನ ವಿರುದ್ಧ ನೀಡಿದ್ದ ದೂರನ್ನ ಇನ್ನೂ ಪರಿಗಣಿಸದೇ ಇರುವುದು ಇನ್ನೂ ಸೋಜಿಗ ಮೂಡಿಸುತ್ತಿದೆ.

ಧಾರವಾಡ ಗ್ರಾಮೀಣ ಭಾಗದಿಂದ ಬಂದು ಜೀವನದಲ್ಲಿ ಗಂಡನನ್ನ ಕಳೆದುಕೊಂಡು ಮತ್ತೊಂದು ಗಂಡನನ್ನ ಕಟ್ಟಿಕೊಂಡು ಆತನ ವಿರುದ್ಧವೂ ದೂರು ನೀಡಿದ್ದ ಮಹಿಳೆಗೆ ‘ಮದುವೆಯಾಗುತ್ತೇನೆ’ ಎಂದು ಹೇಳಿದ್ದ ಸೋಗಿ ಎಂಬ ಪೊಲೀಸ್ ನ ಬಗ್ಗೆ ಇನ್ನೂ ಕ್ರಮ ಜರುಗಿಸದೇ ಇರುವುದು ಪೊಲೀಸರ ಬಗ್ಗೆ ಸಂಶಯ ಮೂಡಲಾರಂಭಿಸಿದೆ.

ಯೂಟ್ಯೂಬ್ ಪತ್ರಕರ್ತನ ಮೇಲೆ ದೂರು ನೀಡಿದ ಕೆಲವೇ ಗಂಟೆಗಳಲ್ಲಿ ಬಂಧನ ಮಾಡಿ ಒಳಗೆ ಕಳಿಸಲಾಗಿದೆ. ಆದರೆ, ಅದೇ ಥರಾ ಡಿವೈಎಸ್ಪಿಗೆ ನೀಡಿದ ದೂರನ್ನ ಕಡೆಗಣಿಸಿ, ಪೊಲೀಸರನ್ನ ರಕ್ಷಣೆ ಮಾಡಲು ಹೊರಟಿದ್ದು ಏಕೆ ಎಂಬ ಸಂಶಯ ಮೂಡುತ್ತಿದೆ.

ದಕ್ಷ ಅಧಿಕಾರಿಯಂದು ಬಿಂಬಿಸಿಕೊಂಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ಅವರಿಗೆ ಸೋಗಿನ ಸೋಗು ಇನ್ನೂ ಗೊತ್ತಾಗಿಲ್ವೆ, ಅಥವಾ ಮೌನ ಜಾಣವೇ.. ಉತ್ತರ ಸಿಗಬೇಕಿದೆ.