“ಜ್ಯೂನಿಯರ್ ಆರ್ಯಭಟ” ಖ್ಯಾತಿಯ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕೊರೋನಾಗೆ ಬಲಿ…!

ಧಾರವಾಡ: ಗಣಿತದಲ್ಲಿ ತೀಕ್ಷ್ಣತೆಯ ಹೊಂದುವ ಜೊತೆಗೆ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ, ಕ್ರಿಯಾಪ್ರೇರಕ ತರಬೇತುದಾರ. ಬಹುತೇಕರ ಪ್ರೀತಿಯ ಜ್ಯೂನಿಯರ್ ಆರ್ಯಭಟ್ ಆಗಿದ್ದ ಪ್ರೌಢಶಾಲೆಯ ಶಿಕ್ಷಕರೋರ್ವರು ಕೊರೋನಾಗೆ ಬಲಿಯಾಗಿದ್ದಾರೆ.
ಕಲಘಟಗಿ ತಾಲೂಕಿನ ಕುರುವಿನಕೊಪ್ಪ ಗ್ರಾಮದ ಸರಕಾರಿ ಪ್ರೌಢಶಾಲೆಯ ಶಿಕ್ಷಕ ಕುಮಾರಸ್ವಾಮಿ ಶಿವಲಿಂಗಯ್ಯ ಮಠದ ಅವರು ಕೇವಲ 38 ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಶಿಕ್ಷಕ ಕುಮಾರಸ್ವಾಮಿ,ಅತಿಯಾದ ಕ್ರಿಯಾಶೀಲರಾಗಿದ್ದರು. ತಮ್ಮದೆ ಯೂಟ್ಯೂಬ್ ಚಾನಲ್ ಮಾಡಿಕೊಂಡು ಮಕ್ಕಳಿಗೆ ಗಣಿತ ಪಾಠ ಮಾಡುತ್ತಿದ್ದರು. ಕುಮಾರಸ್ವಾಮಿ ಅವರನ್ನ ಗಣಿತವೆಂದು ಕರೆದರೂ ತಪ್ಪಾಗಲಾರದು, ಅಷ್ಟೊಂದು ಗಣಿತದಲ್ಲಿ ಹೆಸರು ಮಾಡಿದ್ದರು.
https://www.youtube.com/channel/UCTxpLq3CiNCt9WJlHqJbjmQ
ಅವರಿಗಾಗಿ ಡಯಟ್ ಬಳಗ ಬರೆದದ್ದು ಹೀಗೆ..
ನೋವು ಗೆಳೆಯ… ????????????
ನಿನ್ನಂತ ಗೆಳೆಯ ಇಲ್ಲ
ಶ್ರಮ ನಿನ್ನ ಬದುಕು
ಎಲ್ಲರ ಸ್ಪೂರ್ತಿ ಗೆಳೆಯ
ಇಂದು ನೆನಪು ಮಾತ್ರ ಅದಕ್ಕೆ ನೋವು ಗೆಳೆಯ
ದೈಹಿಕವಾಗಿ ಚಿಕ್ಕದು
ಕೀರ್ತಿಯಲ್ಲಿ ದೊಡ್ಡವನು
ನಮಗೆಲ್ಲ ಮಾರ್ಗದರ್ಶಕ
ಇಂದು ನೆನಪು ಮಾತ್ರ ಅದಕ್ಕೆ ನೋವು ಗೆಳೆಯ
ಗಣಿತದಲ್ಲಿ ವಿದ್ವಾಂಸ ಪರಿಣಿತ
ಗಣಿತ ನಿನ್ನ ಮನೆಯ ಬಾಗಿಲು
ಪರಿಶ್ರಮ ನಿನ್ನ ವ್ಯಕ್ತಿತ್ವ
ಇಂದು ನೆನಪು ಮಾತ್ರ ಅದಕ್ಕೆ ಗೆಳೆಯ ನೋವು
????????????????????????????????
ಆ ದೇವರು ನಿನ್ನ ಆತ್ಮಕ್ಕೆ ಚಿರಶಾಂತಿ ಕೊಡಲಿ ನಿನ್ನ ಕುಟುಂಬಕ್ಕೆ ನೋವು ತಡೆಯುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುವೆ????????????????????????????????????
ಇಂದ: ಡಯಟ್ ಗೆಳೆಯರ ಬಳಗ
???????? ???????? ???????? ????????