ಲವ್, ಸೆಕ್ಸ್, ದೋಖಾ… ಕುಮಾರಸ್ವಾಮಿ ಬಂಧನ…!

ಹುಬ್ಬಳ್ಳಿ: ಯುವತಿಯೋರ್ವಳನ್ನ ಮದುವೆಯಾಗುವುದಾಗಿ ನಂಬಿಸಿ, ದೈಹಿಕವಾಗಿ ಬಳಕೆ ಮಾಡಿಕೊಂಡ ಆರೋಪದ ಮೇಲೆ ನಗರದ ವ್ಯಕ್ತಿಯನ್ನ ವಿದ್ಯಾನಗರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.

ಹುಬ್ಬಳ್ಳಿ ಸಿದ್ಧೇಶ್ವರನಗರದ ನಿವಾಸಿಯಾಗಿರುವ ಯುವತಿಯು ಹುಬ್ಬಳ್ಳಿ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿ, ತನಗೆ ಶಿವಕುಮಾರಸ್ವಾಮಿ ಎಂಬ ಯುವಕ ಮದುವೆಯಾಗುವುದಾಗಿ ಹೇಳಿ, ದೈಹಿಕವಾಗಿ ಬಳಕೆ ಮಾಡಿಕೊಂಡಿದ್ದಾನೆಂದು ಹೇಳಿಕೊಂಡಿದ್ದರು.
ದೂರಿನ ಹಿನ್ನೆಲೆಯಲ್ಲಿ ಯುವತಿಯನ್ನ ವೈಧ್ಯಕೀಯ ತಪಾಸಣೆಯನ್ನ ನಡೆಸಿದ ನಂತರ ಆಪಾದಿತ ಶಿವಕುಮಾರಸ್ವಾಮಿಯನ್ನ ಬಂಧನ ಮಾಡಲಾಗಿದೆ. ಬಂಧಿ ಶಿವಕುಮಾರಸ್ವಾಮಿ ಮೊದಲು ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ, ಇದೇ ಯುವತಿಯು ಸೇರಿದಂತೆ ಹಲವರು ತನಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆಂದು ದೂರು ನೀಡಿದ್ದ.
ಗೋಕುಲ ಪೊಲೀಸ್ ಠಾಣೆಯಲ್ಲಿ ಇದೇ ಘಟನೆಯಲ್ಲಿ ಇಬ್ಬರನ್ನ ಬಂಧನ ಮಾಡಲಾಗಿದೆ. ಈಗ ದೂರದಾರನೇ ವಿದ್ಯಾನಗರ ಠಾಣೆಯಲ್ಲಿ ಬಂಧನವಾಗಿದ್ದಾನೆ. ಹುಬ್ಬಳ್ಳಿಯಲ್ಲಿ ನಡೆದಿರುವ ಸೋಜಿಗ ಮೂಡಿಸುವ ಪ್ರಕರಣವಿದು.