Posts Slider

Karnataka Voice

Latest Kannada News

ಯಾರಿಗೆ ಯಾರೂ ಆಗೋಲ್ಲ: ತಮ್ಮೂರನ್ನ ಲಾಕ್ ಡೌನ್ ಮಾಡಲು ಮುಂದಾದ ಹಿರಿಯರು

1 min read
Spread the love

ಬಳ್ಳಾರಿ: ಜಿಂದಾಲ್ ಕಾರ್ಖಾನೆಯಲ್ಲಿ ಕೊರೊನಾ ಪಾಸಿಟಿವ್ ಹೆಚ್ಚಳವಾಗಿತ್ತಿರುವ ಹಿನ್ನೆಲೆಯಲ್ಲಿ ಸರಕಾರ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ಇಡೀ ಊರನ್ನ ಪುನಃ ಲಾಕ್ ಡೌನ್ ಮಾಡಲು ಮುಂದಾದ ಘಟನೆ ಸಂಭವಿಸಿದೆ.

ಬಳ್ಳಾರಿಯ ಕುಡತಿನಿ ಗ್ರಾಮವನ್ನ ಸಂಪೂರ್ಣ ಲಾಕ್ ಡೌನ್ ಮಾಡಲು ನಿರ್ಧಾರ ಮಾಡಲಾಗಿದೆ. ಗ್ರಾಮದಲ್ಲಿ ಕಠಿಣ ಲಾಕ್ ಡೌನ್ ಗೆ ಕುಡತಿನಿ ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಜಿಂದಾಲ್ ಕಾರ್ಖಾನೆಯಲ್ಲಿ ಕೊರೋನಾ ಕೇಸ್ ಗಳಿಂದ ಭಯಭೀತರಾಗಿರುವ ಜನ ಮೊನ್ನೆಯಷ್ಟೇ ಜಿಂದಾಲ್ ಕಾರ್ಮಿರ ಗ್ರಾಮ ಪ್ರವೇಶವನ್ನು ನಿರ್ಬಂಧಿಸಿದ್ದರು. ಇದೀಗ ತಮ್ಮೂರನ್ನು ಸ್ವತಃ ತಾವೇ ಲಾಕ್ ಡೌನ್ ಮಾಡಲು ಊರ ಹಿರಿಯರು ಮುಂದಾಗಿದ್ದಾರೆ. ನಮ್ಮೂರನ್ನು ನಾವೇ ಕಾಪಾಡಿಕೊಳ್ಳಬೇಕು. ಯಾರಿಗೆ ಯಾರೂ ಆಗಲ್ಲ. ಇನ್ನೊಂದು ವಾರ. ಯಾರೂ ಎಲ್ಲಿಗೂ ಹೋಗಬೇಡಿ. ಯಾರನ್ನೂ ಊರೊಳಕ್ಕೆ ಬಿಟ್ಟುಕೊಳ್ಳಬೇಡಿ ಎಂದು ಗ್ರಾಮಸ್ಥರನ್ನಹಿರಿಯರು ಎಚ್ಚರಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed