Posts Slider

Karnataka Voice

Latest Kannada News

60-10 ವರ್ಷದವರಿಗೆ ಬಸ್ ನಲ್ಲಿ ಅವಕಾಶವಿಲ್ಲ: ಸಾರಿಗೆ ಇಲಾಖೆ ಅಧಿಕಾರಿಯ ಆದೇಶ

1 min read
Spread the love

ಚಾಮರಾಜನಗರ: ಜಿಲ್ಲೆಯ ನಾಲ್ಕು ಡಿಪೋಗಳಿಂದ KSRTC ಬಸ್ ಸಂಚಾರ ಆರಂಭವಾಗಿದೆ. ಚಾಮರಾಜನಗರದಿಂದ ಮೈಸೂರು, ಬೆಂಗಳೂರು ಜಿಲ್ಲೆಗೆ  ಮಾತ್ರ ಬಸ್ ಸಂಚಾರ ಆರಂಭವಿತ್ತು. ಕೊಳ್ಳೆಗಾಲ, ಚಾಮರಾಜನಗರ, ಗುಂಡ್ಲುಪೇಟೆ, ನಂಜನಗೂಡು ಡಿಪೋಗಳಿಂದಲೂ ಇಂದಿನಿಂದ ಬಸ್ ಸಂಚಾರ ಆರಂಭಿಸಲಾಗಿದೆ.

ಗುಂಡ್ಲುಪೇಟೆ, ಕೊಳ್ಳೆಗಾಲ ಡಿಪೋಗಳಿಂದ ಗ್ರಾಮಾಂತರ ಬಸ್ ಸೇವೆ ಲಭ್ಯ. ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ, ಸ್ಯಾನಿಟೈಜರ್ ಬಳಕೆ ಕಡ್ಡಾಯ ಮಾಡಲಾಗಿದೆ. ಬಸ್ ನಿಲ್ದಾಣ ಪ್ರವೇಶ ದ್ವಾರದಲ್ಲಿ ಸ್ಕ್ರೀನಿಂಗ್ ವ್ಯವಸ್ಥೆಯಿದೆ. ಪ್ರತಿ ಬಸ್ ನಲ್ಲಿ ಮೂವತ್ತು ಜನರಿಗೆ ಮಾತ್ರ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಹತ್ತು ವರ್ಷದೊಳಗಿನ ಮಕ್ಕಳಿಗೆ ಮತ್ತು  60 ವರ್ಷ ಮೇಲ್ಪಟ್ಟವರಿಗೆ ಪ್ರಯಾಣ ನಿರ್ಬಂಧಿಸಲಾಗಿದೆ ವಿಭಾಗೀಯ ಸಂಚಾರ ನಿಯಂತ್ರಣಾಧಿಕಾರಿ ಪರಮೇಶ್ ಮಾಹಿತಿ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *