KMC ನಿರ್ದೇಶಕ ಹುದ್ದೆಗೆ ಕೋಟಿ ಕೋಟಿ ಲಂಚ: ಸುಳ್ಳಾಗಿದ್ದರೇ CBI ತನಿಖೆ ಮಾಡ್ಲಿ, ಇಲ್ಲವೇ ಮಂಜುನಾಥನ ಸನ್ನಿಧಿಯಲ್ಲಿ ಆಣೆ ಮಾಡ್ಲಿ…

ಹುಬ್ಬಳ್ಳಿ: ಕೆಎಂಸಿ ನಿರ್ದೇಶಕ ಹುದ್ದೆಗಾಗಿ ನಾನೇ ಬೆಂಗಳೂರಿಗೆ ಹೋಗಿದ್ದೆ. ಹಣವನ್ನ ತಲುಪಿಸಿದ್ದು ನಾನೇ. ನನಗೆ ಮಾಡಲು ಮುಂದಾಗಿದ್ದು ಸತ್ಯ. ಇದು ಸುಳ್ಳು ಎಂದು ಹೇಳುವುದಾದರೇ ಪ್ರಕರಣವನ್ನ ಸಿಬಿಐಗೆ ನೀಡಲಿ ಎಂದು ಕೆಪಿಸಿಸಿ ಕಾರ್ಯದರ್ಶಿ ನೂರಅಹ್ಮದ ನದಾಫ ಹೇಳಿದ್ದಾರೆ.
ಇಲ್ಲಿರುವ ಪೂರ್ಣವಾದ ಹೇಳಿಕೆ ಕೇಳಿ…
ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಯಾವ ಮಟ್ಟಕ್ಕೆ ಹೋಗಿರಬಹುದು ಎಂಬುದನ್ನ ಈ ಪ್ರಕರಣ ಜಗ್ಜಾಹೀರು ಮಾಡಿದಂತಾಗಿದೆ. ರಾಜ್ಯ ಸರಕಾರ ಇದನ್ನ ತನಿಖೆಗೆ ನೀಡಿದರೇ, ಸುಳ್ಳು- ಸತ್ಯ ಹೊರಬರಲಿದೆ.