Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ “ಹೆಣದಾವ ಹೆಣಕ್ಕ್ ಅತ್ರ್.. ಅಂವ್ ತನ್ನ ದುಗ್ಗಾಣೀಗಿ ಅತ್ತಿದ್”: ಶುರುವಾಗಿದೆ ಕಿಟ್ ನೆಪದಲ್ಲಿ ಮತಯಾಚನೆ…!

Spread the love

ಹುಬ್ಬಳ್ಳಿ: ಕೊರೋನಾ ಎಂಬ ಸಾಂಕ್ರಾಮಿಕ ರೋಗ ಬಹುತೇಕ ಕುಟುಂಬಗಳನ್ನ ಕಣ್ಣೀರು ಹಾಕುವಂತೆ ಮಾಡಿದೆ. ಇನ್ನೂ ಕೆಲವರ ಬದುಕು ದುರ್ಭರವಾಗುತ್ತಿದೆ. ಅಷ್ಟೇ ಅಲ್ಲ, ಇಂತಹ ಸಮಯದಲ್ಲೂ ಜೀವ ಭಯದಿಂದ ಕರ್ತವ್ಯದಿಂದ ವಿಮುಖರಾಗದೇ ಕೆಲಸವನ್ನ ನಿರಂತರವಾಗಿ ಮಾಡುತ್ತಿದ್ದಾರೆ. ಇಂತವರಿಗೆಲ್ಲ, ಸಹಾಯ ಮಾಡುವ ನೆಪದಲ್ಲಿ ಕೆಲವರು ಮತಯಾಚನೆ ಮಾಡಲು ಆರಂಭಿಸಿದ್ದಾರೆ.

ಹುಬ್ಬಳ್ಳಿಯ ಘಂಟಿಕೇರಿಯ ಶ್ರೀ ಬಸವೇಶ್ವರ ದೇವಸ್ಥಾನದ ಬಳಿಯಲ್ಲಿ ಆಶಾ ಕಾರ್ಯಕರ್ತರು ಸೇರಿದಂತೆ ಹಲವರಿಗೆ ಕಿಟ್ ವಿತರಣೆ ಮಾಡುವ ಸಮಯದಲ್ಲಿ ನಿರಂಜನಯ್ಯ ಹಿರೇಮಠ ಪರವಾಗಿ ಮತಯಾಚನೆ ಮಾಡಿದ್ದಾರೆ. ಇಲ್ಲಿದೆ ನೋಡಿ ಆ ಎಕ್ಸಕ್ಲೂಸಿವ್ ವೀಡಿಯೋ..

ನೋಡಿದ್ರಲ್ಲಾ, ಕೊರೋನಾ ಸಮಯದಲ್ಲೂ ತಮ್ಮ ಛಾಳಿಯನ್ನ ಈ ರಾಜಕಾರಣಿಗಳು ಬಿಡುವುದಿಲ್ಲವೆಂಬುದು ಗೊತ್ತಾಗತ್ತೆ. ಗ್ರಾಮೀಣ ಭಾಗದಲ್ಲಿ ಒಂದು ಗಾದೆ ಮಾತಿದೆ ‘ಹೆಣದಾವ್ ಹೆಣಕ್ಕ್ ಅತ್ತರ್, ಕೊ.. ತನ್ನ ದುಗ್ಗಾಣೀಗಿ ಅತ್ತೀದ್’ ಎನ್ನುವಂತಾಗಿದೆ.

ಮಾಡುವ ಸಹಾಯವನ್ನ ಉದ್ದೇಶದಿಂದ ಮಾಡಿದರೇ ಅದು ಹೇಗೆ ಸಹಾಯವಾಗತ್ತೆ ಎಂಬುದನ್ನ ಅರಿಯದೇ ಮಾಡುತ್ತಿರುವುದು ಮಾನವೀಯ ಮೌಲ್ಯವನ್ನ ಯಾವ ಹಂತಕ್ಕೆ ತಂದು ನಿಲ್ಲಿಸುತ್ತದೆ ಎಂಬುದನ್ನ ತೋರಿಸುತ್ತಿದೆ.


Spread the love

Leave a Reply

Your email address will not be published. Required fields are marked *