ಆಹಾರ ಧಾನ್ಯ ಕಿಟ್ ಗಳ ಮೂಲ ರೂವಾರಿ ಮೋಹನ ಅಸುಂಡಿ: ಶ್ರೀ ಮೂಜಗು…!

ಹುಬ್ಬಳ್ಳಿ: ತಮ್ಮ ಜೀವನವನ್ನ ಲೆಕ್ಕಿಸದೆ ಆಶಾ ಕಾರ್ಯಕರ್ತೆಯರು, ವೈದ್ಯರು, ಪೊಲೀಸರು ಉತ್ತಮ ಸೇವೆ ಮಾಡುತ್ತಿದ್ದಾರೆ. ಶ್ರೀಮಠದಿಂದ ಕೊರೋನಾ ವಾರಿಯರ್ಸ್ ಕೊಡ ಮಾಡಿದ ಆಹಾರ ಧಾನ್ಯಗಳ ಕಿಟ್ ಗಳ ಮೂಲ ರೂವಾರಿ ಮೋಹನ ಅಸುಂಡಿ ಅವರ ಸೂಕ್ತ ಮಾರ್ಗದರ್ಶನ ಹಾಗೂ ಅವರ ಸೂಕ್ತ ಮಾರ್ಗದರ್ಶನ ಹಾಗೂ ಅವರ ಉತ್ತಮ ಕಾರ್ಯದಿಂದ ಜಿಲ್ಲೆಯಲ್ಲಿನ ಎಲ್ಲ ಕಾರ್ಯಕರ್ತರಿಗೆ ಶ್ರೀ ಮಠದಿಂದ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಮೂರುಸಾವಿರ ಮಠದ ಜಗದ್ದುರು ಡಾ.ಗುರುಶಿದ್ಧ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.

ಮೂರುಸಾವಿರ ಮಠ ಹಾಗೂ ಮಠದ ಅಂಗ ಸಂಸ್ಥೆಗಳಿಂದ ಆಶಾ ಕಾರ್ಯಕರ್ತರಿಗೆ ಆಹಾರ ಧಾನ್ಯಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಮಠದಿಂದ ಏನೇ ನೀಡಿದರೂ ಅದು ಪ್ರಸಾದ ಎಂದೇ ಸ್ವೀಕರಿಸುತ್ತಾರೆ.
ಮೂರುಸಾವಿರ ಮಠದ ವಿದ್ಯಾವರ್ಧಕ ಸಂಘದ ಅರವಿಂದ ಕುಬಸದ, ಮೋಹನ ಅಸುಂಡಿ, ನ್ಯಾಯವಾದಿ ಹನಮಂತ ಶಿಗ್ಗಾಂವಿ, ವೀರೇಶ ಸಂಗಳದ, ವಿಜಯ ಶೆಟ್ಟರ, ಅಮರೇಶ ಹಿಪ್ಪರಗಿ, ಸದಾನಂದ ಡಂಗನವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.