Posts Slider

Karnataka Voice

Latest Kannada News

“ಕೀರ್ತಿಗೊಬ್ಬ” ಕಿರಣ ಬಾಕಳೆ- “ಶಿಖರಗೊಬ್ಬ” ವಿನಾಯಕ ಬಾಕಳೆ: ಜಿಲ್ಲಾ ಪ್ರಶಸ್ತಿ ಪಡೆಯಲಿರುವ ತಂದೆ-ಮಗ…!

Spread the love

ಹುಬ್ಬಳ್ಳಿ: ಜಿಲ್ಲೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ತಂದೆ-ಮಗ ಪ್ರಶಸ್ತಿ ಪಡೆಯಲಿದ್ದು, ಅಕ್ಟೋಬರ್ 10ರಂದು ನಗರದಲ್ಲಿ ಪುರಸ್ಕೃತಗೊಳ್ಳಲಿದ್ದಾರೆ.

ಸಂಘದ ನೀಡುವ ಕುಶಾಲ ಅಣ್ಣಪ್ಪ ಶೆಟ್ಟಿ ಅತ್ಯುತ್ತಮ ಟಿವಿ ವರದಿಗಾರಿಕೆ ಪ್ರಶಸ್ತಿಯನ್ನ ಹಿರಿಯ ವರದಿಗಾರ ಕಿರಣ ಬಾಕಳೆ ಹಾಗೂ ಕ್ಯಾಮರಾಮನ್ ವಿನಾಯಕ ಬಾಕಳೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ದೂರದರ್ಶನದಲ್ಲಿ ಪ್ರಸಾರವಾದ ಸೋಂಕಿತರಿಗೆ ಸೇವೆಯ ಹಸ್ತ ನೀಡಿದ ವೈದ್ಯರು ವರದಿಗೆ ಪ್ರಶಸ್ತಿ ಲಭಿಸಿದೆ.

ಹುಬ್ಬಳ್ಳಿಯ ಮಾಧ್ಯಮ ರಂಗದಲ್ಲಿ ಕಿರಣ ಬಾಕಳೆ ಅವರದ್ದು ಅಚ್ಚೋತ್ತಿದ ಹೆಸರು. ಪ್ರತಿಯೊಬ್ಬರೊಂದಿಗೆ ಸಮಾಧಾನ ಚಿತ್ತರಾಗಿ ನಡೆದುಕೊಂಡು ಬಂದಿರುವ ಕಿರಣ ಬಾಕಳೆಯವರ ಸಾಧನೆ ಕಡಿಮೆಯೇನಲ್ಲ. ಪತ್ರಿಕಾ ರಂಗದಲ್ಲಿ ನೂರಾರೂ ವರ್ಷ ಉಳಿಯುವ ಹೆಸರು ಕಿರಣ ಅವರದ್ದು.

ಇಂತಹ ಸಾಧಕರು ತಮ್ಮದೇ ವೃತ್ತಯಲ್ಲಿ ಹಲವು ಪತ್ರಿಕೆಗಳಿಗೆ ಕೆಲಸ ಮಾಡುತ್ತ ಬಂದಿದ್ದರು. ಇದೀಗ ಹಲವು ವರ್ಷಗಳಿಂದ ದೂರದರ್ಶನಕ್ಕೂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಮಾಡಿದ ಉತ್ತಮ ವರದಿಗೆ ಜಿಲ್ಲಾ ಪ್ರಶಸ್ತಿ ಲಭಿಸಿದೆ.

ಕಿರಣ ಬಾಕಳೆ ಅವರ ಪುತ್ರ ವಿನಾಯಕ ಬಾಕಳೆ ಕೂಡಾ ಅಪ್ಪನಂತೆ ಹಸನ್ಮುಖಿ. ತಾನು ಮಾಡುವ ಕೆಲಸದಲ್ಲಿ ಪರಿಶ್ರಮದಿಂದ ಮುಂದು ಬಂದವ. ತಂದೆಯ ಗೌರವವನ್ನೂ ಕಾಪಾಡಿಕೊಂಡು ಹೋಗುತ್ತಿರುವುದು ಇದೇ ವಿನಾಯಕ.

ಅಪರೂಪದ ಈ ಜೋಡಿಗೆ ಕಂಗ್ರಾಟ್ಸ್..


Spread the love

Leave a Reply

Your email address will not be published. Required fields are marked *