Posts Slider

Karnataka Voice

Latest Kannada News

ಪಾಲಿಕೆಯ ಮಾಜಿ ಸದಸ್ಯೆ ಮಗ, ಅಳಿಯ ನೀರು ಪಾಲು: ಪಿಯುಸಿ ಕ್ಲಾಸ್ ಮೆಂಟ್ಸ್ ಇನಸ್ಟಾಗ್ರಾಂ “ಮೆಂಟಾಲೀಟಿ”

1 min read
Spread the love

ಹುಬ್ಬಳ್ಳಿ: ತಾಲೂಕಿನ ಕಿರೇಸೂರ ಗ್ರಾಮದ ಬಳಿ ಘಟನೆ ನಡೆದಿದ್ದು, ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯೊಳಗೆ. ಏನು ಆಗಿದೆ, ನೀರು ಪಾಲಾದವರೂ ಯಾರೂ, ಬದುಕುಳಿದವರು ಯಾರೂ, ಅವರ ವಿದ್ಯಾಭ್ಯಾಸ್ ಏನಾಗಿದೆ ಎಲ್ಲವನ್ನೂ ತಿಳಿಬೇಕಾದರೇ ಇದನ್ನ ಪೂರ್ತಿಯಾಗಿ ಓದಿ.

ಬದುಕುಳಿದ ನತಾಶಾ ಯುವರಾಜ ಭಂಡಾರಿ 19 ವರ್ಷದ ಯುವತಿಯಾಗಿದ್ದು, ಪಿಯುಸಿ ಸೆಂಕೆಂಡ್ ಇಯರ್ ಮುಗಿಸಿದ್ದು, ಹುಬ್ಬಳ್ಳಿ ವಿದ್ಯಾನಗರ ಸಿಮೆಂಟ್ ಚಾಳ ನಿವಾಸಿಯಾಗಿದ್ದಾರೆ. ಹುಬ್ಬಳ್ಳಿಯ ನವೀನ ಪಾರ್ಕ ಸಾಗರ ಕಾಲೋನಿಯ ಸಲ್ಮಾನ ಸ್ಯಾಮುವೇಲ್ ಪಿಳ್ಳೆ 20 ವರ್ಷದ ಯುವಕನಾಗಿದ್ದು, ವಾಟರ್ ಪ್ರೂಫ್ ಕೆಲಸ ಮಾಡುತ್ತಾನೆ. ಈತನು ಕೂಡಾ ಘಟನೆಯಲ್ಲಿ ಬದುಕುಳಿದಿದ್ದಾನೆ.

ನೀರು ಪಾಲಾದ ಸನ್ನಿ ಜಾನ್ಸನ ಕಲ್ಲಕುಂಟ್ಲಾ 21 ವರ್ಷದ ಯುವಕನಾಗಿದ್ದು ಐಟಿಐ ಮುಗಿಸಿದ್ದಾನೆ. ಅಷ್ಟೇ ಅಲ್ಲ, ಪಾಲಿಕೆಯ ಮಾಜಿ ಸದಸ್ಯ ಸುವರ್ಣ ಕಲ್ಲಕುಂಟ್ಲಾ ಪುತ್ರನಾಗಿದ್ದಾನೆ. ಪೂನಾ ಮೂಲದ 21 ವರ್ಷದ ಗಜಾನನ ಅಲಿಯಾಸ್ ಗಜ್ಜು ರಾಜಶೇಖರ ಬಿಎ ಅಭ್ಯಾಸ ಮಾಡುತ್ತಿದ್ದು, ಈತ ಸನ್ನಿಯ ಅತ್ತೆಯ ಮಗನಾಗಿದ್ದಾನೆ. ಹುಬ್ಬಳ್ಳಿ ಗಾಂಧಿವಾಡಾದ ಆರ್ ಜಿಎಸ್ ನಿವಾಸಿ 21 ವರ್ಷದ ಜೋಶಿ ಕ್ಲಮೆಂಟ್ ಜಂಗಮ ಪಿಯುಸಿ ಮುಗಿಸಿದ್ದಾನೆ. ಈತ ಕೂಡಾ ಸನ್ನಿಯ ಸೋದರನಾಗಬೇಕು.

ಎಲ್ಲರೂ ಕೂಡಿಕೊಂಡು ಕಿರೇಸೂರ ಬಳಿ ಹೋದಾಗ ಈ ದುರ್ಘಟನೆ ನಡೆದಿದ್ದು, ಹುಬ್ಬಳ್ಳಿ ಗ್ರಾಮೀಣ ಠಾಣೆ ಹಾಗೂ ನವಲಗುಂದ ಠಾಣೆ ಪೊಲೀಸರು ಜೊತೆಗೆ ಕಿರೇಸೂರ ಗ್ರಾಮಸ್ಥರು ಕಾರ್ಯಾಚರಣೆಗೆ ಸಹಾಯ ಮಾಡುತ್ತಿದ್ದು, ಕತ್ತಲೆ ಆವರಿಸಿದ್ದರಿಂದ ಯುವಕರ ಬಗ್ಗೆ ಯಾವುದೇ ಸುಳಿವು ದೊರಕಿಲ್ಲ.


Spread the love

Leave a Reply

Your email address will not be published. Required fields are marked *