ಛಾಯಾಗ್ರಾಹಕರಿಗೆ ಆರ್ಥಿಕ ಸಹಾಯ ಮಾಡಿ: ಕಿರಣ ಬಾಕಳೆ ಮನವಿ..!

ಹುಬ್ಬಳ್ಳಿ: ಕೊರೋನಾ ಸಮಯದಲ್ಲಿ ಛಾಯಾಗ್ರಾಹಕರು ಕೂಡಾ ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇದರಿಂದ ಸಾಕಷ್ಟು ಕುಟುಂಬಗಳು ತೊಂದರೆ ಅನುಭವಿಸುತ್ತಿವೆ. ಹಾಗಾಗಿ, ಸರಕಾರ ಛಾಯಾಗ್ರಾಹಕರಿಗೂ ಆರ್ಥಿಕ ಸಹಾಯ ಮಾಡಬೇಕೆಂದು ಹುಬ್ಬಳ್ಳಿ ಪೋಟೋ ಮತ್ತು ವೀಡಿಯೋಗ್ರಾಫರ್ ಸಂಘದ ಅಧ್ಯಕ್ಷ ಕಿರಣ ಬಾಕಳೆ ಅವರು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮೂಲಕ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸಚಿವ ಜಗದೀಶ ಶೆಟ್ಟರ ಅವರಿಗೆ ಮನವಿ ಮಾಡಿಕೊಂಡಿರುವ ಕಿರಣ ಬಾಕಳೆ ಅವರು, ಛಾಯಾಗ್ರಾಹಕರ ಬದುಕಿನ ಬಗ್ಗೆ ವಿವರಿಸಿದ್ದಾರೆ.
ಮನವಿ ಪತ್ರ
ಮಾನ್ಯ ಜಗದೀಶ್ ಶೆಟ್ಟರ್
ಜಿಲ್ಲಾ ಉಸ್ತುವಾರಿ ಸಚಿವರು
ಹುಬ್ಬಳ್ಳಿ
—————-ಛಾಯಾಗ್ರಾಹಕರಿಗೂ ಆರ್ಥಿಕ ಸಹಾಯ ನೀಡಿ————
ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ ಸಂಘ ದ ವತಿಯಿಂದ ತಮ್ಮ ಮೂಲಕ ಸರಕಾರಕ್ಕೆ ಮನವಿ ಮಾಡಿಕೊಳ್ಳುವುದೇನೆಂದರೆ…
ಕಳೆದ ಎರಡು ವರ್ಷದಿಂದ ಮಹಾಮಾರಿ ಕರೋನಾ ಗೆ ನಮ್ಮ ಛಾಯಾಗ್ರಾಹಕರು ಕೆಲಸವಿಲ್ಲದೆ ಕೈಕಟ್ಟಿ ಕುಳಿತಿದ್ದು ಆರ್ಥಿಕವಾಗಿ ಜರ್ಜಿತರಾಗಿದ್ದು, ತಮ್ಮ ಹೊಟ್ಟೆಪಾಡಿಗಾಗಿ ಮುಂದೇನು ಎಂದು ಚಿಂತಾಕ್ರಾಂತರಾಗಿದ್ದಾರೆ. ತಮ್ಮ ಕುಟುಂಬದ ನಿರ್ವಹಣೆ ಬಗ್ಗೆ ಕೂಡ ಚಿಂತಿಸುತ್ತಿದ್ದು ನಮಗೂ ಕೂಡಾ ವಿಶೇಷ ಕಲಾವಿದರ ಕ್ಷೇತ್ರದ ಅಡಿಯಲ್ಲಿ ನಮಗೂ ಅವಕಾಶ ಮಾಡಿ ಕೊಟ್ಟು ನಮ್ಮ ಛಾಯಾಗ್ರಾಹಕರಿಗೂ ವಿಶೇಷ ಆರ್ಥಿಕ ಪ್ಯಾಕೇಜ್ ಕೊಡಬೇಕೆಂದು ಜಿಲ್ಲಾಉಸ್ತುವಾರಿ ಸಚಿವರಿಗೆ ಮತ್ತು ರಾಜ್ಯದ ಮುಖ್ಯಮಂತ್ರಿಗಳಿಗೆ ನಮ್ಮ ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ ಸಂಘದ ವತಿಯಿಂದ ಆಗ್ರಹಿಸುತ್ತೇವೆ.
ಧನ್ಯವಾದಗಳು..
ಕಿರಣ್ ಬಾಕಳೆ
ಅಧ್ಯಕ್ಷರು ,
ಹುಬ್ಬಳ್ಳಿ ಫೋಟೋ ಮತ್ತು ವಿಡಿಯೋಗ್ರಾಫರ ಸಂಘ