Posts Slider

Karnataka Voice

Latest Kannada News

ಬಹುದೊಡ್ಡ ಹಗರಣ ಬಯಲು ಮಾಡಲಿರುವ “ಬಡವರ ಮನೆ ಮಗ”- ಸಿಐಡಿ ಅಧಿಕಾರಿಗಳ ಬಣ್ಣಗೇಡು…

1 min read
Spread the love

ಧಾರವಾಡ: ಬಹುಕೋಟಿ ಹಗರಣವನ್ನ ಹೊರಗೆ ಹಾಕಿದ್ದ ಪ್ರಕರಣದಲ್ಲಿ ಅಧಿಕಾರಿಗಳು ಭಾಗಿಯಾಗಿ ಕೇಸ್‌ನ್ನ ಹಳ್ಳ ಹಿಡಿಸಲಾಗಿದೆ ಎಂಬ ಸತ್ಯ ಕಂಡುಕೊಂಡಿರುವ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಮಹತ್ವದ ದಾಖಲೆಗಳನ್ನ ಹೊರಗೆ ಹಾಕಲಿದ್ದಾರೆಂದು ಗೊತ್ತಾಗಿದೆ.

ಧಾರವಾಡ ಸುತ್ತಮುತ್ತ ನಡೆದಿರುವ ಕೆಐಎಡಿಬಿ ಹಗರಣವನ್ನ ಬಯಲಿಗೆ ತಂದು, ವಂಚಕರು ದೋಚಿದ್ದ ಹಣವನ್ನ ಸರಕಾರದ ಬೊಕ್ಕಸಕ್ಕೆ ಮರಳಬೇಕೆಂದು ಆಶಾಭಾವನೆ ಹೊಂದಿದ್ದ ಬಸವರಾಜ ಕೊರವರ ಅವರಿಗೆ ಸಿಐಡಿ ಅಧಿಕಾರಿಗಳು ನಡೆಸಿರುವ ಕಾಟಾಚಾರದ ತನಿಖೆಯಿಂದ ಘಾಸಿಗೊಂಡಿದ್ದಾರೆಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಇಂದು ಹಗರಣದಲ್ಲಿ ಸಿಐಡಿ ಅಧಿಕಾರಿಗಳು ನಡೆಸಿರುವ ತನಿಖೆಯಲ್ಲಿ ಅಧಿಕಾರಿಗಳು ನಡೆದುಕೊಂಡಿರುವ ರೀತಿಯನ್ನ ದಾಖಲೆಗಳ ಸಮೇತ ಬಹಿರಂಗ ಮಾಡುತ್ತಿದ್ದಾರೆಂದು ಖಚಿತ ಮೂಲಗಳಿಂದ ತಿಳಿದು ಬಂದಿದೆ.


Spread the love

Leave a Reply

Your email address will not be published. Required fields are marked *