ಹಿರೇಬಾಗೇವಾಡಿ “ಖಾದ್ರಿ” ಪೈಗಂಬರವಾಸಿ…ಸಂಜೆ ಅಂತ್ಯಕ್ರಿಯೆ..!

ಬೆಳಗಾವಿ: ಜಿಲ್ಲೆಯ ಹಿರೇಬಾಗೇವಾಡಿ ಗೌಸಿಯಾ ಖಾದ್ರಿ ದರ್ಗಾದ ಹಿರಿಯ ಪೀಠಾಧಿಪತಿ ಮಂಜಲೆ ದಾದಾ ಸಜ್ಜಾದೆ ನಶೀನ ಸಯ್ಯದ ಆದಮಶಾ ಅಬ್ದುಲರಹಮಾನ ಶಾ ಖಾದ್ರಿ (69) ಸೋಮವಾರ ರಾತ್ರಿ ಪೈಗಂಬರ ವಾಸಿಯಾಗಿದ್ದಾರೆ.

ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ಹಿರೇಬಾಗೇವಾಡಿ ಗ್ರಾಮದಲ್ಲಿ ಮೆರವಣಿಗೆ ನಂತರ ದರ್ಗಾ ಆವರಣದಲ್ಲಿ ನೆರವೇರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.