Posts Slider

Karnataka Voice

Latest Kannada News

ಕೇಶ್ವಾಪೂರದಿಂದ ಕೋರ್ಟ್ ಕಡೆ ಹೋಗಬೇಕಾ.. ಹೋಗಬೇಡಿ.. ಅಲ್ಲಿ..! ವೀಡಿಯೋಗಳಿವೆ ನೋಡಿ

Spread the love

ಹುಬ್ಬಳ್ಳಿ: ಬೆಳ್ಳಂಬೆಳಿಗ್ಗೆ ನಡೆದ ಲಾರಿ ಪ್ರಕರಣದಿಂದ ಪೂರ್ವ ಸಂಚಾರಿ ಠಾಣೆಯ ಪೊಲೀಸರು ಯಾವುದೇ ಅವಘಡ ಸಂಭವಿಸದಂತೆ ತಡೆಗಟ್ಟಲು ಕೇಶ್ವಾಪುರದಿಂದ ಕೋರ್ಟ್ ಗೆ ಬರುವ ರಸ್ತೆಯನ್ನ ತಾತ್ಕಾಲಿಕವಾಗಿ ಬಂದ್ ಮಾಡಿದ್ದಾರೆ.

ಸರಕು ಸಾಮಾನು ಹೊಂದಿದ್ದ ಲಾರಿ ಕೋರ್ಟ್ ವೃತ್ತದಲ್ಲಿ ಮಗುಚಿ ಬಿದ್ದಿದ್ದು ಲಾರಿಯಿಂದ ನೂರಾರೂ ಲೀಟರ್ ಡಿಸೇಲ್ ರಸ್ತೆಯುದ್ದಕ್ಕೂ ಸೋರಿ ಹೋಗಿದೆ. ಈ ಕಾರಣಕ್ಕೆ ಯಾವುದೇ ಅನಾಹುತ ಸಂಭವಿದಂತೆ ಮುಂಜಾಗ್ರತೆ ತೆಗೆದುಕೊಳ್ಳಲಾಗುತ್ತಿದೆ.

ಟ್ರ್ಯಾಕ್ಟರ್ ಮೂಲಕ ನೀರನ್ನ ಬಿಟ್ಟು ಡಿಸೇಲ್ ಸೋರಿದ ಜಾಗದಲ್ಲಿ ಬೆಂಕಿ ತಗುಲದಂತೆ ಕ್ರಮಕ್ಕೆ ಮುಂದಾಗಿದ್ದಾರೆ ಪೊಲೀಸರು. ಸಾರ್ವಜನಿಕರು ಕೆಲ ಗಂಟೆಗಳ ಕಾಲ ಬೇರೆ ಮಾರ್ಗದ ಮೂಲಕ ಸಂಚರಿಸುವಂತೆ ಪೊಲೀಸರು ಸೂಚನೆ ನೀಡಿದ್ದು, ಜನತೆ ಸಹಕಾರ ನೀಡುತ್ತಿದ್ದಾರೆ.

ಬೆಳಿಗ್ಗೆ ನಡೆದ ಘಟನೆಯಲ್ಲಿ ಚಾಲಕ ರಾಮಣ್ಣ ಪ್ರಾಣಾಪಾಯದಿಂದ ಪಾರಾಗಿದ್ದು, ಕಿಮ್ಸನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.


Spread the love

Leave a Reply

Your email address will not be published. Required fields are marked *