Posts Slider

Karnataka Voice

Latest Kannada News

ಧಾರವಾಡದ ಕೆಲಗೇರಿ ಕಾಪಾಡಬೇಕಾ… ಹಾಗಿದ್ದರೇ ಮಾರ್ಚ್ 9ಕ್ಕೆ “ಅಲ್ಲಿಗೆ” ಬನ್ನಿ…!!!

Spread the love

ಧಾರವಾಡ: ನಗರದ ಕೀರ್ತಿಯನ್ನ ಇಮ್ಮಡಿಗೊಳಿಸುತ್ತ ಬಂದಿರುವ ಕೆಲಗೇರಿ ಕೆರೆಯನ್ನ ಉಳಿಸುವ ಮತ್ತೂ ಮತ್ತಷ್ಟು ಸುಂದರವಾಗಿಸುವ ಜವಾಬ್ದಾರಿ ಸಾರ್ವಜನಿಕರದ್ದು ಇದೆ. ಹಾಗಾಗಿ, ಆ ಜವಾಬ್ದಾರಿಗೆ ಹೆಗಲಾಗಿ ಕರ್ನಾಟಕ ಕೃಷಿ ವಿಶ್ವವಿದ್ಯಾಲಯ ನಿಲ್ಲಲು ಮುಂದಾಗಿದೆ.

ಹೌದು… ಕೃಷಿ ವಿಶ್ವವಿದ್ಯಾಲಯ ಮಾರ್ಚ 9 ರಂದು ಕೆಲಗೇರಿ ಕೆರೆಯನ್ನ ಸುಂದರವಾಗಿಸುವ ಪಣದೊಂದಿಗೆ ರೆಡಿಯಾಗಿದೆ.

ಈ ಸ್ವಚ್ಚತಾ ಕಾರ್ಯಕ್ರಮ ಕೇವಲ ಕೃಷಿ ವಿಶ್ವವಿದ್ಯಾಲಯದವರಿಗೆ ಮಾತ್ರ ಅಂದುಕೊಂಡು ಮನೆಯಲ್ಲಿ ಕೂಡಬೇಡಿ. ಸುತ್ತಮುತ್ತಲಿನ ಜನ, ಬೆಳಗಾದರೇ ವಾಯುವಿಹಾರ ಮಾಡುತ್ತಿರುವವರು ಅವತ್ತು ಸ್ವಲ್ಪ ಸಮಯವನ್ನ ಕೆರೆಗಾಗಿ ಮೀಸಲಿಡಿ.


Spread the love

Leave a Reply

Your email address will not be published. Required fields are marked *