ಕತ್ತಿ ಸಹೋದರರಿಗೆ ಭೇಟಿಯಾದ ಸಿಎಂ ಯಡಿಯೂರಪ್ಪ: ಮಾತಾಡದೇ ನಡೆದ ಉಮೇಶ ಕತ್ತಿ
1 min readಬೆಂಗಳೂರು: ರಾಜ್ಯಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಲಾಬಿಗಳು ಆರಂಭವಾಗಿದ್ದು, ಮಂತ್ರಿಗಿರಿ ಕನಸು ಕಂಡಿದ್ದ ಉಮೇಶ ಕತ್ತಿ ಕೂಡಾ, ತಮ್ಮ ಸಹೋದರ ರಮೇಶ ಕತ್ತಿಯನ್ನ ರಾಜ್ಯಸಭೆಗೆ ಕಳಿಸಬೇಕೆಂಬ ಬಯಕೆ ಹೆಚ್ಚಿದ್ದು ಅದೇ ಕಾರಣಕ್ಕೆ ಸಹೋದರನ ಸಮೇತ ಸಿಎಂ ಯಡಿಯೂರಪ್ಪನವರನ್ನ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಸಿಎಂ ನಿವಾಸದಲ್ಲಿ ಭೇಟಿಯಾದ ಕತ್ತಿ ಸಹೋದರರು, ಒಂದು ಗಂಟೆಗೂ ಅಧಿಕ ಕಾಲ ಸಿಎಂ ಜೊತೆ ಮಾತುಕತೆ ನಡೆಸಿದರು. ಇದಾದ ಬಳಿಕ ಹೊರಬಂದ ಸಹೋದರರು, ಮಾಧ್ಯಮದ ಜೊತೆ ಏನೂ ಮಾತಾಡದೇ ತೆರಳಿದರು.
ಕಳೆದ ವಾರವಷ್ಟೇ ಕತ್ತಿಯವರ ಪಡೆ, ಸಿಎಂ ಯಡಿಯೂರಪ್ಪನವರ ಬಗ್ಗೆ ಅಸಮಾಧಾನ ಹೊಂದಿವೆ ಎಂದು ಬಿಂಬಿಸುವ ಪ್ರಯತ್ನ ನಡೆದಿತ್ತು. ಅವೆಲ್ಲವೂ ಕಪೋಲಕಲ್ಪಿತ ಎಂಬುದು ಇಂದು ಗೊತ್ತಾಗಿದೆ.