Posts Slider

Karnataka Voice

Latest Kannada News

ಕರ್ನಾಟಕ ವಿಶ್ವ ವಿದ್ಯಾಲಯ: ಸಂಶೋಧನಾ ವಿದ್ಯಾರ್ಥಿಗಳ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

1 min read
Spread the love

ಧಾರವಾಡ: ನಾಡಿನ ಹೆಸರಾಂತ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದ ಸಂಶೊಧನಾ ವಿದ್ಯಾರ್ಥಿಗಳ ಸಂಘಕ್ಕೆ 2020-21ನೇ ಸಾಲಿನ ಅದ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಈ ಹಿಂದೆ ಕಾರ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅಮಿತ್ ಶಿಂದೆ ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಇನ್ನೂ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಮಲ್ಲೇಶ ಚನ್ನಬತ್ತಿಯವರನ್ನು ಸಂಘದ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಗೌರವಾಧ್ಯಕ್ಷ ದುಷ್ಯಂತ ಓಲೇಕಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇನ್ನುಳಿದಂತೆ ಉಪಾಧ್ಯಕ್ಷ ಸ್ಥಾನದಲ್ಲಿ ಉಮರ ಫಾರೂಕ ಮೀರಾನಾಯಕ, ಸಂಘಟನಾ ಕಾರ್ಯದರ್ಶಿ ಸ್ಥಾನದಲ್ಲಿ ಮುರಳಿ ನಾಗಲಾವಿ, ಉಪ ಸಂಘಟನಾ ಕಾರ್ಯದರ್ಶಿ ದುಂಡಪ್ಪ, ಮಹಿಳಾ ಪ್ರತಿನಿಧಿ ಮಾಧವಿ ನಂದಿಮಠ, ಖಜಾಂಚಿ ಅನಿಲ ರಜಪೂತ ಹಾಗೂ ಕಾರ್ಯದರ್ಶಿ ರಾಜು ಚವ್ಹಾನ, ಸಚಿನ್, ಅಶ್ರಫ್,ಚೇತನ ಚವ್ಹಾನ ಯಲ್ಲಪ್ಪ, ಪಲ್ಲವಿ, ರಾಮು, ತಿಲಕರಾಜ, ಅಮಿತ್,ನೇಹಾ ನಾಯಕ, ಇನ್ನಿತರರು ಮುಂದುವರಿಯಲಿದ್ದಾರೆ.

ಈ ಹಿಂದೆ ಸಂಶೋಧನಾ ವಿದ್ಯಾರ್ಥಿಗಳ ಸಂಘದ ಅದ್ಯಕ್ಷ ಸ್ಥಾನದಲ್ಲಿ ಮಂಜು ಹೊಂಗಲದ ಅವರು ಇದ್ದರು.


Spread the love

Leave a Reply

Your email address will not be published. Required fields are marked *